twitter
    For Quick Alerts
    ALLOW NOTIFICATIONS  
    For Daily Alerts

    ಉಪ್ಪಿ ಹಾಡಿದ ಎಚ್‌ಟುಓ ಗೀತೆಗಳ ಯಶಸ್ಸು

    By Super
    |

    'ಚಿನ್ನಾರಿಮುತ್ತ "ಎಂದೇ ಈಗಲೂ ಎಲ್ಲರಿಂದ ಕರೆಸಿಕೊಳ್ಳುವ ವಿಜಯ ರಾಘವೇಂದ್ರ ಗಾಂಧಿನಗರಿಗರ ಕನಸಿನ ಹುಡುಗ. 'ನಿನಗಾಗಿ" ಚಿತ್ರದ ಈತನ ಅಭಿನಯ ಕಂಡು ಒಬ್ಬೊಬ್ಬರು ಒಂದೊಂದು ರೀತಿ ಹೊಗಳಲು ಶುರುವಿಟ್ಟಿದ್ದಾರೆ. ಇದಾವುದರ ಪರಿವೆಯೂ ಇಲ್ಲದಂತಿರುವ ವಿಜಯ ರಾಘವೇಂದ್ರ ನಾನು ಮೊದಲು ಒಬ್ಬ ಪರಿಪೂರ್ಣ ನಟನಾಗಬೇಕು ಎಂದು ಹೇಳಿ ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದಾನೆ.

    1. ಚಿತ್ರ ನಟ ಆಗಬೇಕು ಅನ್ನೋದು ನಿಮ್ಮ ಕನಸಾಗಿತ್ತಾ ?

    ಖಂಡಿತ ಇಲ್ಲ. ನನಗೆ ಡಾಕ್ಟರಾಗಬೇಕು. ತಪ್ಪಿದ್ರೆ ಬ್ಯುಸಿನೆಸ್‌ಮನ್‌ ಆಗಬೇಕು ಅಂತ ಆಸೆಯಿತ್ತು. ಆಕಸ್ಮಿಕವಾಗಿ ಬಾಲನಟನಾದೆ. ಪ್ರಶಸ್ತಿ ಕೂಡ ಬಂತು. ಈಗ ಮತ್ತೆ ಅಕಸ್ಮಿಕವಾಗೇ ನಾಯಕನಟ ಆಗಿದೀನಿ !

    2. ಚಲನಚಿತ್ರಗಳಲ್ಲಿ ನಾಯಕ ನಟನ ವಿಜೃಂಭಣೆ ಅಗತ್ಯವಾ ?

    ನೇರವಾಗಿ ಹೇಳ್ತೀನಿ. ಹೀರೋ, ಹೀರೋಯಿಸಂ, ಇದರಲ್ಲೆಲ್ಲ ನಂಗೆ ನಂಬಿಕೆ ಇಲ್ಲ. ಚಿತ್ರಗಳಲ್ಲಿ ನಾಯಕನನ್ನ ಸಾಮಾನ್ಯ ಮನುಷ್ಯರ ರೀತಿ ತೋರಿದ್ರೆ ಸಾಕು.

    3. ನಿಮ್ಮ ಬದುಕಿನ ಮಹದಾಸೆ ಏನು ?

    ನಟನಾಗಿ ಒಳ್ಳೆ ಹರು ಮಾಡಬೇಕು. ನಾನೇ ಒಂದಷ್ಟು ಚಿತ್ರಗಳನ್ನು ನಿರ್ದೇಶಿಸಬೇಕು...

    4. ನಿಮಗೆ ತಮಾಷೆ ಅನ್ನಿಸಿದ ಅದೇ ಸಂದರ್ಭಕ್ಕೆ ರೋಮಾಂಚನ ಉಂಟುಮಾಡಿದ ಪ್ರಸಂಗ ಹೇಳಿ...

    ಕೊಟ್ರೇಶಿ ಕನಸು ಸಿನಿಮಾ ಬಿಡುಗಡೆ ಆಗಿತ್ತು. ಒಂದು ಮಧ್ಯಾಹ್ನ ಮಲಗಿದ್ದಾಗ ನಂಬೆ ರಾಷ್ಟ್ರ ಪ್ರಶಸ್ತಿ ಬಂದಂತೆ ಕಸುಬಿತ್ತು. ಥತ್‌, ಅಂದುಕೊಂಡು ಸೈಕಲ್ಲೇರಿ ಒಂದು ರೌಂಡ್‌ ಹೋಗುವ ಅಂತ ಹೊರಬಂದ್ರೆ ದಾರೀಲಿ ಸಿಕ್ಕವರೆಲ್ಲ ಕಂಗ್ರಾಟ್ಸ್‌ ಹೇಳಿದ್ರು. ನಿಜಕ್ಕೂ ನಂಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು ! ಅದು ತಮಾಷೆಯೂ ಹೌದು, ರೋಮಾಂಚನವೂ ಹೌದು, ಏನಂತೀರಿ?

    English summary
    My aim is to direct some good movies - Vijaya Raghavendra
    Wednesday, October 2, 2013, 11:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X