ವಿಜಯಲಕ್ಷ್ಮಿಗೆ ಚಪ್ಪಲಿಯಲ್ಲಿ ಹೊಡೆದರೆ ದರ್ಶನ್

By Rajendra

Actor Darshan
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ ಮಂಜುಳಾ ಅವರು ಶುಕ್ರವಾರ (ಸೆ.9) ಹಲ್ಲೆಗೆ ಒಳಗಾಗಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಸಾಂತ್ವನ ನೀಡಿದ್ದಾರೆ. ಬಳಿಕ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತಾನಾಡಿದರು.

ದರ್ಶನ್ ತಮ್ಮ ನಡವಳಿಕೆಯನ್ನು ತಿದ್ದುಕೊಂಡರೆ ಮತ್ತೆ ಅವರೊಂದಿಗೆ ಸಂಸಾರ ಮಾಡುವ ಭರವಸೆಯನ್ನು ವಿಜಯಲಕ್ಷ್ಮಿ ನೀಡಿದ್ದಾರೆ. ಅವರು ಸಾಕಷ್ಟು ನೊಂದಿದ್ದಾರೆ. ಅವರ ತಲೆಯ ಮೇಲೆ ರಕ್ತ ಇನ್ನೂ ಹೆಪ್ಪುಗಟ್ಟಿತ್ತು. ದರ್ಶನ್ ಅವರು ಇನ್ನು ಮುಂದೆ ಯಾವುದೇ ಕಿರುಕುಳ ನೀಡಲ್ಲ ಎಂದು ಸ್ಪಷ್ಟ ಭರವಸೆ ನೀಡಿದರೆ ರಾಜಿಗೆ ಯತ್ನಿಸುತ್ತೇವೆ ಎಂದರು.

ವಿಜಯಲಕ್ಷ್ಮಿ ಅವರು ಸಾಕಷ್ಟು ನೊಂದಿದ್ದಾರೆ. ತಮ್ಮ ಚಪ್ಪಲಿಯಲ್ಲೆ ದರ್ಶನ್ ಹೊಡೆದರು ಎಂದು ವಿಜಯಲಕ್ಷ್ಮಿ ತಿಳಿಸಿದ್ದಾರೆ ಎಂದ ಅವರು, ತುಂಬ ನೊಂದಿರುವ ಅವರನ್ನು ಹೆಚ್ಚಿಗೆ ಪ್ರಶ್ನಿಸಲು ತಾವು ಬಯಸಲಿಲ್ಲ ಎಂದರು. ತಾಯಿ ಮತ್ತು ಮಗುವಿನ ರಕ್ಷಣೆಯನ್ನು ನಾವು ತೆಗೆದುಕೊಂಡಿದ್ದೇವೆ. ಈ ಘಟನೆಯಿಂದ ತಾವು ಕಳವಳಗೊಂಡಿದ್ದಾಗಿ ಮಂಜುಳಾ ಹೇಳಿದರು.

ಮದುವೆಯಾಗಿ ಎಂಟು ವರ್ಷಗಳಾಗಿವೆ. ಏಳು ವರ್ಷ ತಮ್ಮನ್ನು ತುಂಬ ಪ್ರೀತಿಯಿಂದ ನೋಡಿಕೊಂಡರು. ಕಳೆದ ಒಂದು ವರ್ಷದಿಂದ ಪತ್ನಿಗೆ ಭಾರಿ ಕಿರುಕುಳ ನೀಡಿದ್ದಾರೆ ದರ್ಶನ್. ಇನ್ನು ಮುಂದೆ ಹೀಗೆ ನಡೆದುಕೊಳ್ಳುವುದಿಲ್ಲ ಎಂಬ ಭರವಸೆ ನೀಡಿದರೆ ರಾಜಿ ಮಾಡಿಕೊಳ್ಳುವುದಾಗಿ ವಿಜಯಲಕ್ಷ್ಮಿ ಹಾಗೂ ಅವರ ತಾಯಿ ಹೇಳಿದ್ದಾಗಿ ಮಂಜುಳಾ ತಿಳಿಸಿದರು. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Did Darshan beat his wife Vijayalakshmi with chappal? Karnataka Womens Commission chairman C Manjula, who met Kannada actor Darshan's wife Vijayalakshmi in hospital, has revealed that Vijayalakshmi is ready to compromise with Darshan if he changes his behavior.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X