ವಿದ್ಯಾ ಬಾಲನ್ ಶ್ರೇಷ್ಠನಟಿಯಲ್ಲ: ಭಾವನಾ ಕೊಂಕು

ಅದೇನು ಡರ್ಟಿ ಚಿತ್ರದಲ್ಲಿ ವಿದ್ಯಾ ಮಾಡಿದ್ದಕ್ಕಿಂತ ಸಭ್ಯ ಪಾತ್ರವೇ? ಚಿಂಗಾರಿಯನ್ನೇ ಉದಾಹರಣೆ ನೀಡಬೇಕಾಗಿಯೂ ಇಲ್ಲ, ಅದಕ್ಕೂ ಮೊದಲು ಭಾವನಾ ಸಾಕಷ್ಟು ಚಿತ್ರಗಳಲ್ಲಿ ಅಂತಹ ಪಾತ್ರಗಳನ್ನು ಮಾಡಿದ್ದಾರೆ. ಹಾಗಿದ್ದೂ ವಿದ್ಯಾ ಬಾಲನ್ ಅವರನ್ನು ಟೀಕಿಸಿದರೆ ಭಾವನಾ ಮಾತಿಗೆ ಬೆಲೆಕೊಡುವುದು ಹೇಗೆ ಎಂಬುದು ಎಲ್ಲರ ಪ್ರಶ್ನೆ. ತನಗೆ ಪ್ರಶಸ್ತಿ ಬಂದಿಲ್ಲವೆಂಬ ಕಾರಣಕ್ಕೆ ಈ ಟೀಕೆ ಎನ್ನುವುದು ಸ್ಪಷ್ಟ.
ಇದಕ್ಕೂ ಮೊದಲು ಇದೇ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿದ್ದ 'ಶಾಂತಿ' ಚಿತ್ರದಲ್ಲೂ ನಟಿಸಿ ಭಾವನಾ ಹೆಸರು ಮಾಡಿದ್ದರು. ಆದರೆ ಶ್ರೇಷ್ಠನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಬಂದಿರಲಿಲ್ಲ. ಹಾಗಾಗಿ ಈ ಬಾರಿ ಭಾವನಾ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರು. ಆದರೆ ಪ್ರಶಸ್ತಿ ಆಯ್ಕೆ ಸಮಿತಿ ಭಾವನಾರನ್ನು ಮೆಚ್ಚಿಲ್ಲ, 'ಭಾಗೀರಥಿ' ಚಿತ್ರವನ್ನೂ ಪರಿಗಣಿಸಿಲ್ಲ. ಒಟ್ಟಿನಲ್ಲಿ ಭಾಗೀರಥಿ ಭಾವನಾಗೆ ಬಾಗಿನ ದೊರೆತಿಲ್ಲ. (ಒನ್ ಇಂಡಿಯಾ ಕನ್ನಡ)
More from Filmibeat
English summary
Kannada Actress Bhavana told that Best Actress award Winner actress Vidya Balan did not acted as the best one. She felt this is a miracle, she won The Best Actress 59th National Film Award.
ಭಾವನಾ ವಿದ್ಯಾ ಬಾಲನ್ ಗಿರೀಶ್ ಕಾಸರವಳ್ಳಿ ರಾಷ್ಟ್ರೀಯ ಪ್ರಶಸ್ತಿ ವಿದ್ಯಾಬಾಲನ್ bhavana girish kasaravalli national award vidya balan


Click it and Unblock the Notifications











