Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಡೀ ಜಗತ್ತಿನ ಮುಂದೆ ಖಷ್ಬೂ ಅದೇನು ಹೇಳ್ಬಿಡ್ತಾರೋ!
ವಿವಾಹ ಪೂರ್ವ ಲೈಂಗಿಕ ಸಂಬಂಧ ತಪ್ಪಲ್ಲ ಎಂಬ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ನಟಿ ಖುಷ್ಬೂ, ವಿಶ್ವಸಂಸ್ಥೆಯ ಕರೆಯ ಮೇರೆಗೆ ವಿಶ್ವಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. 2013 ರಲ್ಲಿ ಕೀನ್ಯಾದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಮಾತನಾಡುವಂತೆ ನಟಿ ಖುಷ್ಬೂಗೆ ವಿಶ್ವಸಂಸ್ಥೆ ಕರೆನೀಡಿದೆ. ಇದು ಖುಷ್ಬೂಗೆ ಸಖತ್ ಖುಷಿ ನೀಡಿದೆ.
ಕಾರಣ, ಇಂಥದೊಂದು ಬೃಹತ್ ಸಮಾವೇಶದಲ್ಲಿ ಭಾಗವಹಿಸುತ್ತಿರುವ ತಮಿಳಿನ ಪ್ರಪ್ರಥಮ ನಟಿ ಖುಷ್ಬೂ. ಸಂತೋಷವಾಗದಿರುತ್ತದೆಯೇ? ಆದರೆ ಖುಷ್ಬೂ ಸತ್ಯವನ್ನು ಮುಖಕ್ಕೆ ಹೊಡೆದಂತೆ ಹೇಳುವ ಜಾಯಮಾನದವರು. ಅಲ್ಲಿ ಇದ್ದದ್ದನ್ನು ಇದ್ದಂತೆ ಹೇಳಿ ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಳ್ಳದಿದ್ದರೆ ಸಾಕು ಎಂದು ಅವರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರಂತೆ.
ಈ ಮೊದಲು 'ವಿವಾಹ ಪೂರ್ವ ಲೈಂಗಿಕ ಸಂಬಂಧ ತಪ್ಪಲ್ಲ' ಎಂಬ ಅವರ ಹೇಳಿಕೆಗೆ ಜನರ ತೀವ್ರ ವಿರೋಧ ಹಾಗೂ ಕೋರ್ಟ್, ಕಾನೂನು ಸಮರದಲ್ಲಿ ಸಿಕ್ಕಿ ಒದ್ದಾಡಿದ್ದರು ಖುಷ್ಬೂ. ಆದರೆ ಕೋರ್ಟ್ ನಲ್ಲಿ ಅವರೇ ವಿಜಯಶಾಲಿಯಾಗಿ ಅವರ ವಿರುದ್ಧ ಹೋಗಿದ್ದ ಜನರಿಗೆ ಮುಖ ಮಂಗಳಾರತಿ ಮಾಡಿಸಿದ್ದಾರೆ ಈಕೆ. ಇದೀಗ ವಿಶ್ವಸಂಸ್ಥೆ ಕರೆದಿದೆ, ಅಲ್ಲಿ ಅದೇನು ಹೇಳುತ್ತಾರೋ ಕಾದು ನೋಡೋಣ. (ಒನ್ ಇಂಡಿಯಾ ಕನ್ನಡ)