Don't Miss!
- Automobiles Self-Driving Car: ಭಾರತೀಯರು ಅಸಮಾನ್ಯರು... ಬೊಲೆರೋದಲ್ಲಿ ಭವಿಷ್ಯ ಬದಲಿಸುವ ತಂತ್ರಜ್ಞಾನ!
- News ಕೆ. ಎಸ್. ಈಶ್ವರಪ್ಪಗೆ 2013ರ ಚುನಾವಣೆ ನೆನಪಿಸಿದ ಜನರು!
- Technology Lava: ಭಾರತದಲ್ಲಿ ಸುನಾಮಿ ಎಬ್ಬಿಸಲಿದೆ ಲಾವಾ O2! ನಿರೀಕ್ಷಿತ ಫೀಚರ್ಸ್ ಬಗ್ಗೆ ತಿಳಿಯಿರಿ
- Sports IPL 2024: RCB ವಿರುದ್ಧ ಈ ಒಂದು ದಾಖಲೆಯನ್ನು ಯಾರು ಬೇಗ ನಿರ್ಮಿಸುತ್ತಾರೆ?
- Lifestyle ಮೂರು ಮಕ್ಕಳು ನನ್ನದ್ದಲ್ಲ ಎಂದು ಆತನಿಗೆ ತಿಳಿದಾಗ.... ಹೆಂಡತಿಯ ಮಹಾಮೋಸ
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹಿಳಾ ಕಾನೂನನ್ನು ಬಾಯಿಗೆತ್ತಿಕೊಂಡ ರಮ್ಯಾ
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮಹಿಳಾ ದಿನಾಚರಣೆಯ ಪ್ರಯುಕ್ತ ಎಂಬಂತೆ ಮಹಿಳೆಯರ ಬಗ್ಗೆ ರಮ್ಯಾ ಹೆಚ್ಚಿನ ಕಾಳಜಿಯಿಂದ ಮಾತನಾಡಿದ್ದಾರೆ. ಇದೀಗ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ತೋರಿಸುತ್ತಿರುವ, ಯುವ ಕಾಂಗ್ರೆಸ್ ಸದಸ್ಯೆಯೂ ಆಗಿರುವ ರಮ್ಯಾರ ಇತ್ತೀಚಿನ ಮಹಿಳಾ ಕಾಳಜಿ ಮಾತುಗಳು ಈ ವೇಳೆಯಲ್ಲಿ ಹೆಚ್ಚಿನ ಮಹತ್ವ ಪಡೆಯಲಿವೆ.
ಹೆಣ್ಣಿನ ಪರವಾಗಿ ಮಾತನಾಡಿರುವ ರಮ್ಯಾ "ಹೆಣ್ಣಿನ ಪ್ರತಿ ಹಂತದ ಬೆಳವಣಿಗೆ ಮತ್ತು ಸಾಧನೆಗೆ ಕೇವಲ ಕುಟುಂಬದವರು ಮಾತ್ರ ಕಾರಣರಾಗುವುದಿಲ್ಲ. ಸಮಾಜವೂ ಕಾರಣವಾಗಿರುತ್ತದೆ. ಸಮಾಜ ಹೆಣ್ನನ್ನು ಗೌರವಿಸುವುದರೊಂದಿಗೆ ಆಕೆಯ ಸಂಕಷ್ಟದಲ್ಲೂ ಭಾಗಿಯಾಗಬೇಕು. ಉದ್ಯೋಗಸ್ಥ ಮಹಿಳೆಯರಿಗೆ ನೀಡುವ ಸೌಲಭ್ಯಗಳು ಹೆಚ್ಚಾಗಬೇಕು. ಹೆಣ್ಣಿನ ರಕ್ಷಣೆಗೆ ಕಾನೂನು ಸ್ಪಂದಿಸುವ ಕೆಲಸ ಆಗಬೇಕು" ಎಂದಿದ್ದಾರೆ.
ರಮ್ಯಾ ಏನೇ ಹೇಳಿದರೂ ಹೇಳದಿದ್ದರೂ ಅದಕ್ಕೊಂದು ಅರ್ಥವಿರುತ್ತದೆ. ಹಾಗೇ, ಅವರು ಏನೇ ಮಾಡಿದರೂ ಮಾಡದಿದ್ದರೂ ಅದಕ್ಕೂ ಕೂಡ. ಸದ್ಯಕ್ಕೆ ಪ್ಲಾಂಟಿಂಗ್ ನಲ್ಲಿ ಆಸಕ್ತಿ ತಳೆದಿರುವ ರಮ್ಯಾ, ಕೊಡುಗೆಯಾಗಿ ಬಂದ ಒಂದಷ್ಟು ಗಿಡಗಳ ಆರೈಕೆಯಲ್ಲಿ ತೊಡಗಿದ್ದಾರಂತೆ. ಜೊತೆಗೆ ಸ್ಟೀವ್ ಜಾಬ್ಸ್ ಅವರ ಅಟೋಬಯಾಗ್ರಫಿ ಪುಸ್ತಕ ಓದುವುದರಲ್ಲಿ ಕೂಡ ತೊಡಗಿಕೊಂಡಿದ್ದಾರಂತೆ. (ಒನ್ ಇಂಡಿಯಾ ಕನ್ನಡ)