Don't Miss!
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹಿಳಾ ಕಾನೂನನ್ನು ಬಾಯಿಗೆತ್ತಿಕೊಂಡ ರಮ್ಯಾ
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮಹಿಳಾ ದಿನಾಚರಣೆಯ ಪ್ರಯುಕ್ತ ಎಂಬಂತೆ ಮಹಿಳೆಯರ ಬಗ್ಗೆ ರಮ್ಯಾ ಹೆಚ್ಚಿನ ಕಾಳಜಿಯಿಂದ ಮಾತನಾಡಿದ್ದಾರೆ. ಇದೀಗ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ತೋರಿಸುತ್ತಿರುವ, ಯುವ ಕಾಂಗ್ರೆಸ್ ಸದಸ್ಯೆಯೂ ಆಗಿರುವ ರಮ್ಯಾರ ಇತ್ತೀಚಿನ ಮಹಿಳಾ ಕಾಳಜಿ ಮಾತುಗಳು ಈ ವೇಳೆಯಲ್ಲಿ ಹೆಚ್ಚಿನ ಮಹತ್ವ ಪಡೆಯಲಿವೆ.
ಹೆಣ್ಣಿನ ಪರವಾಗಿ ಮಾತನಾಡಿರುವ ರಮ್ಯಾ "ಹೆಣ್ಣಿನ ಪ್ರತಿ ಹಂತದ ಬೆಳವಣಿಗೆ ಮತ್ತು ಸಾಧನೆಗೆ ಕೇವಲ ಕುಟುಂಬದವರು ಮಾತ್ರ ಕಾರಣರಾಗುವುದಿಲ್ಲ. ಸಮಾಜವೂ ಕಾರಣವಾಗಿರುತ್ತದೆ. ಸಮಾಜ ಹೆಣ್ನನ್ನು ಗೌರವಿಸುವುದರೊಂದಿಗೆ ಆಕೆಯ ಸಂಕಷ್ಟದಲ್ಲೂ ಭಾಗಿಯಾಗಬೇಕು. ಉದ್ಯೋಗಸ್ಥ ಮಹಿಳೆಯರಿಗೆ ನೀಡುವ ಸೌಲಭ್ಯಗಳು ಹೆಚ್ಚಾಗಬೇಕು. ಹೆಣ್ಣಿನ ರಕ್ಷಣೆಗೆ ಕಾನೂನು ಸ್ಪಂದಿಸುವ ಕೆಲಸ ಆಗಬೇಕು" ಎಂದಿದ್ದಾರೆ.
ರಮ್ಯಾ ಏನೇ ಹೇಳಿದರೂ ಹೇಳದಿದ್ದರೂ ಅದಕ್ಕೊಂದು ಅರ್ಥವಿರುತ್ತದೆ. ಹಾಗೇ, ಅವರು ಏನೇ ಮಾಡಿದರೂ ಮಾಡದಿದ್ದರೂ ಅದಕ್ಕೂ ಕೂಡ. ಸದ್ಯಕ್ಕೆ ಪ್ಲಾಂಟಿಂಗ್ ನಲ್ಲಿ ಆಸಕ್ತಿ ತಳೆದಿರುವ ರಮ್ಯಾ, ಕೊಡುಗೆಯಾಗಿ ಬಂದ ಒಂದಷ್ಟು ಗಿಡಗಳ ಆರೈಕೆಯಲ್ಲಿ ತೊಡಗಿದ್ದಾರಂತೆ. ಜೊತೆಗೆ ಸ್ಟೀವ್ ಜಾಬ್ಸ್ ಅವರ ಅಟೋಬಯಾಗ್ರಫಿ ಪುಸ್ತಕ ಓದುವುದರಲ್ಲಿ ಕೂಡ ತೊಡಗಿಕೊಂಡಿದ್ದಾರಂತೆ. (ಒನ್ ಇಂಡಿಯಾ ಕನ್ನಡ)