ತಾರಾ, ವೇಣು ದಂಪತಿಗಳಿಂದ ಸತ್ಯನಾರಾಯಣ ಪೂಜೆ

ತೀರಾ ವೈಯಕ್ತಿಕವಲ್ಲದ ಈ ಪೂಜಾ ಕಾರ್ಯಕ್ರಮಕ್ಕೆ ಕ್ರೇಜಿ ಸ್ಟಾರ್ ವಿ ರವಿಚಂದ್ರನ್, ಮಾಲಾಶ್ರೀ, ಅನುಪ್ರಭಾಕರ್, ರಮೇಶ್ ಅರವಿಂದ್ ಮತ್ತವರ ಪತ್ನಿ ಅರ್ಜನಾ, ಸುಧಾರಾಣಿ, ಹೇಮಾ ಚೌದರಿ, ಕೆಸಿಎನ್ ಚಂದ್ರಶೇಖರ್ ಸೇರಿದಂತೆ ಸಿನಿಮಾ ಪತ್ರಕರ್ತರು, ಕುಟುಂಬಿಕರು, ಸಂಬಂಧಿಕರು ಶ್ರೀಸತ್ಯನಾರಾಯಣ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ತಾರಾ ದಂಪತಿಗಳು ಬಂದ ಅತಿಥಿಗಳಿಗೆ ಅಚ್ಚುಕಟ್ಟಾದ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಇಪ್ಪತ್ತೈದ್ದಕ್ಕೂ ಹೆಚ್ಚು ಭಕ್ಷ್ಯ ಭೋಜ್ಯಗಳು ಅತಿಥಿಗಳ ಮನಸ್ಸಂತೋಷ ಪಡಿಸಿದವು. ಶ್ರೀಸತ್ಯನಾರಾಯಣ ಪೂಜಾಫಲವು ತಾರಾ ಮತ್ತು ವೇಣು ದಂಪತಿಗಳಿಗೆ ಶುಭಪ್ರದವಾಗಲಿ ಎಂದು ದಟ್ಸ್ ಕನ್ನಡ ಹಾರೈಕೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಭಾರತೀಯ ಜನತಾ ಪಕ್ಷಕ್ಕೆ 'ತಾರಾ' ಬಲ?
ನಟಿ ತಾರಾ ಸುರಿಸಿದ ಗಂಗಾ ಕಾವೇರಿ ಪ್ರವಾಹ


Click it and Unblock the Notifications