Don't Miss!
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್ ಬಗ್ಗೆ ಭಾರತದ ಮಾಜಿ ಆಟಗಾರರ ಅಭಿಪ್ರಾಯ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- News ಧಾರವಾಡ; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ವಾಪಸ್, ಕಣದಲ್ಲಿ 17 ಮಂದಿ
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bangalore Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Automobiles ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಣಜಿ, ಓಂ ವಿರುದ್ಧ ಮಾನನಷ್ಟ ಮೊಕದ್ದಮೆ ಗುಡುಗು
"ನಮ್ಮದು ಮರ್ಯಾದಸ್ಥ ಕುಟುಂಬ. ಈ ಚಿತ್ರದಲ್ಲಿ ಬಂದ ಆ ಪಾತ್ರದಿಂದ ನಮ್ಮ ಕುಟುಂಬಕ್ಕೆ ಅವಮಾನವಾಗಿದೆ. ಜನರು ನಮ್ಮನ್ನು ತಪ್ಪಾಗಿ ತಿಳಿದುಕೊಳ್ಳಲು ಈ ಚಿತ್ರದಿಂದ ಅವಕಾಶವಾಗಿದೆ. ಹಾಗಾಗಿ ಚಿತ್ರದಿಂದ ಆ ಪಾತ್ರ ಹಾಗೂ ಹೆಸರನ್ನು ಕಿತ್ತೊಗೆಯಬೇಕು. ಇಲ್ಲದಿದ್ದರೆ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಪಡಿಸುತ್ತೇವೆ ಹಾಗೂ ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ. ಅಷ್ಟೇ ಅಲ್ಲ, ಮಾನನಷ್ಟ ಮೊಕದ್ದಮೆ ಹೂಡುತ್ತೇವೆ" ಎಂದು ಹೇಳಿದ್ದಾರೆ.
"ನಿರ್ಮಾಪಕ ಅಣಜಿ ನಾಗರಾಜ್ ಅವರಿಗೆ ನಾನು ಯಾವುದೇ ಜೀವ ಬೆದರಿಕೆ ಕರೆ ಮಾಡಿಲ್ಲ. ಚಿತ್ರದಲ್ಲಿ ಬರುವ ಆ ಪಾತ್ರ ಹಾಗೂ ಕೆಟ್ಟದಾಗಿ ಬಿಂಬಿಸಿರುವ ಕುರಿತು ಮಾತನಾಡಿದ್ದೇನೆ ಅಷ್ಟೇ" ಎಂದಿದ್ದಾರೆ ಮಂಜುನಾಥ್ ತಾವರಕೇಡ. ಮಂಜುನಾಥ್ ಮಾತಿಗೆ ಪ್ರತಿಕ್ರಿಯಿಸಿರುವ ಅಣಜಿ ನಾಗರಾಜ್ "ಮಂಜುನಾಥರಿಂದ ನನಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ. ಅವರು ಕರೆ ಮಾಡಿ ಮಾತನ್ನಾಡಿದ್ದಾರಷ್ಟೇ" ಎಂದು ಸ್ಪಷ್ಟಪಡಿಸಿದ್ದಾರೆ.
ಕೇಶಪ್ಪ ತಾವರಕೇಡ ಹೆಸರು ಮತ್ತು ಪಾತ್ರ ಕಿತ್ತುಹಾಕುವ ಆಗ್ರಹಕ್ಕೆ ಅಣಜಿ ನಾಗರಾಜ್ "ನಾನು ಚಿತ್ರಕ್ಕೆ ಹಣ ಹಾಕಿದವನು, ನಿರ್ಮಾಪಕ ಅಷ್ಟೇ. ಚಿತ್ರದ ರೂವಾರಿ, ನಿರ್ದೇಶಕರ ಜೊತೆ ಮಾತನಾಡಿ ಖಂಡಿತವಾಗಿಯೂ ಹೆಸರನ್ನು ಮ್ಯೂಟ್ ಮಾಡಿಸುತ್ತೇನೆ. ಅದಕ್ಕೆ ನಾಲ್ಕೈದು ದಿನ ವೇಳೆ ತಗಲುತ್ತದೆ. ಪಾತ್ರವನ್ನು ಕಿತ್ತು ಹಾಕುವ ಕುರಿತೂ ನಿರ್ದೇಶಕರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ" ಎಂದು ಭರವಸೆ ನೀಡಿದ್ದಾರೆ. (ಒನ್ ಇಂಡಿಯಾ ಕನ್ನಡ)