Don't Miss!
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏಪ್ರಿಲ್ನಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹಂಗಾಮ
ಕಡೆಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್)ಗೆ ಮುಹೂರ್ತ ನಿಗದಿಯಾಗಿದೆ. ಈ ಹಿಂದೆ ಜನವರಿ 2011ರಿಂದ ಶುರುವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಆ ಮಾತು ಸುಳ್ಳಾಯಿತು. ಫೆಬ್ರವರಿ ಕೊನೆಗೆ ಖಂಡಿತ ಶುರವಾಗಲಿದೆ ಎಂಬ ಮಾತೂ ಅರ್ಥ ಕಳೆದುಕೊಂಡಿತು. ಏಪ್ರಿಲ್ನಿಂದ ಸಿಸಿಎಲ್ ಪಂದ್ಯಾವಳಿ ನಡೆಯುವುದು ಪಕ್ಕಾ ಎಂದಿದ್ದಾರೆ 'ಕರ್ನಾಟಕ ಬುಲ್ಡೋಜರ್ಸ್' ತಂಡದ ನಾಯಕ ಕಿಚ್ಚ ಸುದೀಪ್.
ಈಗಾಗಲೆ ಪ್ರಾಕ್ಟೀಸ್ ಕೂಡ ಆರಂಭವಾಗಿದ್ದು ಕನ್ನಡ ಸಿನಿಮಾ ತಾರೆಗಳು ಅರಮನೆ ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ. ಅಶೋಕ್ ಖೇಣಿ ಕನ್ನಡ ಸಿನಿಮಾ ತಾರೆಗಳ ತಂಡವನ್ನು ರು.17 ಕೋಟಿಗೆ ಖರೀದಿಸಿದ್ದಾರೆ. ಬೆಂಗಳೂರು ಅರಮನೆ ಮೈದಾನದಲ್ಲಿ ಬೆಳಗ್ಗೆ 6.15ರಿಂದ ವಾರದಲ್ಲಿ ಮೂರು ದಿನ ಪ್ರಾಕ್ಟೀಸ್ ಭರದಿಂದಸಾಗುತ್ತಿದೆ.
ಈ ಹಿಂದೆ ಕರ್ನಾಟಕ ತಂಡಕ್ಕೆ 'ಬೆಂಗಳೂರು ರಾಯಲ್ಸ್' ಎಂದು ಹೆಸರಿಡಲಾಗಿತ್ತು. ಬಳಿಕ ಅದನ್ನು 'ಕರ್ನಾಟಕ ಬುಲ್ಡೋಜರ್ಸ್' ಎಂದು ಮರುನಾಮಕರಣ ಮಾಡಿದ್ದಾರೆ ಅಶೋಕ್ ಖೇಣಿ. ಮುಂಬೈ ಬಾಲಿವುಡ್ ತಂಡಕ್ಕೆ ನಾಯಕನಾಗಿರುವ ಸಲ್ಮಾನ್ ಖಾನ್ ಅವರ ತಂಡವನ್ನು ಮಣ್ಣುಮುಕ್ಕಿಸುವ ಶಪಥವನ್ನು ಖೇಣಿ ತೊಟ್ಟಿದ್ದಾರೆ.