ದರ್ಶನ್ ಚಿತ್ರ ನಿರ್ಮಾಪಕ-ನಿರ್ದೇಶಕರ ಮಾತುಗಳು

ಸದ್ಯ ಶೂಟಿಂಗ್ ಕೊನೆಯ ಹಂತದಲ್ಲಿರುವ 'ಚಿಂಗಾರಿ' ನಿರ್ಮಾಪಕರಲ್ಲೊಬ್ಬರಾದ ಮನು, "ನಮಗೂ, ದರ್ಶನ್ ಅವರಿಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕಮಿಟ್ ಆಗಿರುವುದರ ಪ್ರಕಾರ ಎಲ್ಲವನ್ನೂ ಮಾಡಿದ್ದಾರೆ. ಇನ್ನುಳಿದಿರುವ ಶೂಟಿಂಗ್ ಪೂರ್ತಿಗೊಳಿಸಿ, 'ಸಾರಥಿ' ನೂರು ದಿನ ಪೂರೈಸಿದ ಮೇಲೆ 'ಚಿಂಗಾರಿ' ಯನ್ನು ತೆರೆಗೆ ತರಲಿದ್ದೇವೆ" ಎಂದರು.
ಇಲ್ಲಿಗೆ ಎಲ್ಲಾ ಮುಗಿಯಿತು ಅನ್ನುವಾಗ ಗಡ್ಡಧಾರಿ ಗೆಟಪ್ಪಿನಲ್ಲಿರುವ ದರ್ಶನ್ ಗೆ ಯಾರೋ ಕೇಳಿದರು, "ಹೀಗೆ ಗಡ್ಡ ಬಿಟ್ಟಿದ್ದು ಯಾಕೆ? "ದರ್ಶನ್ ನಗುತ್ತಾ ಉತ್ತರಿಸಿದರು... ಹಾಗೇ ಸುಮ್ಮನೆ, ಎರಡ್ಮೂರು ದಿನ ಇರಲಿ ಅಂತ"
ಹೀಗೆ ಮುಗಿದ ಪತ್ರಿಕಾಗೋಷ್ಠಿಯಿಂದ ಪತ್ರಕರ್ತರು ಹಾಗೂ ದರ್ಶನ್ ದಂಪತಿಗಳಿಬ್ಬರಿಗೂ ಧನ್ಯತಾಭಾವ ಮನೆಮಾಡಿತ್ತು. ಹಿನ್ನೆಲೆಯಲ್ಲಿ 'ತಪ್ಪು ಮಾಡೋದು ಸಹಜ ಕಣೋ.., ತಿದ್ದಿ ನಡೆಯೋನು ಮನುಜ ಕಣೋ...' ಎಂಬ ಹಾಡು ತೇಲಿಬರುತ್ತಿರುವಂತೆ ಭಾಸವಾಯಿತು.
ಕೊನೆಯದಾಗಿ ಹೇಳಬಹುದಾದದ್ದು ಇಷ್ಟು- ಈಗ ದರ್ಶನ್ ಬದಲಾಗಿದ್ದಾರೆ ಅನ್ನಿಸುವಂತಿದೆ ಅವರ ನಡೆ-ನುಡಿ. ಅದೇ ಸಹಜ. ಕಾಲ ಮತ್ತು ಪ್ರಕೃತಿಯಲ್ಲಿ ಬದಲಾವಣೆ ಸಹಜ. ಹೌದು, ಈಗ ದರ್ಶನ್ ಬದಲಾಗಿದ್ದಾರೆ. ಈ ಒಳ್ಳೆಯ ಬದಲಾವಣೆಯಿಂದ ಅವರಿಗೆ, ಅವರನ್ನು ನಂಬಿಬಂದವರಿಗೆ, ಸುತ್ತಲಿನ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಇದು ನಮ್ಮಾಸೆ. ಇದೇ ನಮ್ಮೆಲ್ಲರ ಹಾರೈಕೆ ಕೂಡ...
(ಒನ್ ಇಂಡಿಯಾ ಕನ್ನಡ)


Click it and Unblock the Notifications











