ಪಾಪ ದರ್ಶನ್ ಮೇಲೆ ಗೂಬೆ ಕೂರಿಸಬೇಡಿ: ವಿಜಯ್

ಸೆಲೆಬ್ರಿಟಿಗಳ ಜೀವನದಲ್ಲಿ ಏನಾದರೂ ಸಂಭವಿಸಿದರೆ ರೋಚಕವಾಗಿ ತೋರಿಸುವುದನ್ನು ಬಿಟ್ಟು ಬಿಡಿ. ಸಂಸಾರ ಸರಿಯಾಗುವುದು ಮುಖ್ಯ ಎಂದು ವಿಜಿ ಹೇಳಿದ್ದಾರೆ.
ನಂತರ ಗಾಯಿತ್ರಿ ಆಸ್ಪತ್ರೆಗೆ ತೆರಳಿದ ದುನಿಯಾ ವಿಜಯ್ ಅವರು ದರ್ಶನ್ ತೂಗದೀಪ್ ಅವರ ಪತ್ನಿವಿಜಯಲಕ್ಷ್ಮಿ ಹಾಗೂ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
'ದಯವಿಟ್ಟು ಸಂಸಾರದ ಬಿರುಕು ಸರಿಮಾಡಿಕೊಳ್ಳಿ. ಮತ್ತೆ ಈ ರೀತಿ ಆಗದಂತೆ ಎಚ್ಚರವಹಿಸಿ' ಎಂದು ದರ್ಶನ್ ಪತ್ನಿಗೆ ಕಿವಿಮಾತು ಹೇಳಿದ್ದಾರೆ. ವಿಜಯ್ ಗೆ ಹಾಸ್ಯ ನಟ ಬುಲೆಟ್ ಪ್ರಕಾಸ್, ನಾಗಕಿರಣ್ ಸಾಥ್ ನೀಡಿದ್ದರು.
ಅಭಿಮಾನಿಗಳಿಗೆ ಮನವಿ: ದರ್ಶನ್ ಬಂಧನದಿಂದ ಉದ್ರಿಕ್ತಗೊಂಡು ಗಲಾಟೆ ನಡೆಸಬೇಡಿ ಎಂದು ದರ್ಶನ್ ಅಭಿಮಾನಿಗಳಿಗೆ ದುನಿಯಾ ವಿಜಯ್ ಮನವಿ ಮಾಡಿದ್ದಾರೆ. ಈ ನಡುವೆ ದರ್ಶನ್ ಅಭಿಮಾನಿಗಳು ವಿಜಯನಗ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸುತ್ತಿದ್ದು, ದರ್ಶನ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಐಪಿಸಿ ಸೆಕ್ಷನ್ 498 ಎ(ವರದಕ್ಷಿಣೆ ಕಿರುಕುಳ), 506, 307(ಮಾರಣಾಂತಿಕ ಹಲ್ಲೆ) ಆರೋಪ ಹೊತ್ತಿರುವ ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು ಹೊಸ ವಿಷಯವೇನಲ್ಲ. ಹಿಂದೆ ಕೂಡಾ ಹಲವು ಸಾರಿ ಹಾದಿರಂಪ ಬೀದಿ ರಂಪವಾಗಿತ್ತು. ಆದರೆ, ರಕ್ಷಿತಾ ಪ್ರೇಮ್, ಶಿವರಾಜ್ ಕುಮಾರ್, ಅಂಬರೀಷ್ ಮತ್ತೊಮ್ಮೆ ಸೃಜನ್ ಲೋಕೇಶ್ ಅವರು ಬುದ್ಧಿವಾದ ಹೇಳಿ ದರ್ಶನ್ ಸಂಸಾರದ ಬಿರುಕಿಗೆ ತೇಪೆ ಹಾಕಿದ್ದರು. [ಫುಲ್ ಕವರೇಜ್]


Click it and Unblock the Notifications











