Don't Miss!
- News ಮಳೆ.. ಮಳೆ.. ಗುಡುಗು ಸಹಿತ ಭರ್ಜರಿ ಮಳೆಗೆ ತತ್ತರಿಸಿದ ಕರ್ನಾಟಕ!
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೌಸ್ ಫುಲ್ ಪ್ರದರ್ಶನ ಕಂಡ 'ಬಂಗಾರದ ಮನುಷ್ಯ'
ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಭಾರತಿ ವಿಷ್ಣುವರ್ಧನ್, ಲೀಲಾವತಿ, ಆರತಿ ಹಾಗೂ ನಟ ವಿನೋದ್ ರಾಜ್ ಅವರ ಆಗಮನದಿಂದ ಕಾರ್ಯಕ್ರಮ ಮತ್ತಷ್ಟು ರಂಗೇರಿತು. ಸೃಜನಶೀಲ ನಿರ್ದೇಶಕ ರಾಮು ಕಣಗಾಲ್ ಸಹ ಉಪಸ್ಥಿತರಿದ್ದರು. ಡಿಗ್ನಿಟಿ ಚಲನಚಿತ್ರೋತ್ಸವ ಏಪ್ರಿಲ್7 ರಿಂದ 11ರವರೆಗೆ ನಡೆಯಲಿದೆ.
ಕಬ್ಬನ್ ಪಾರ್ಕ್ ನ ಬಾಲ ಭವನ ಸಭಾಂಗಣದಲ್ಲಿ 1950ರಿಂದ 1970 ರ ಅವಧಿಯಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ವರನಟ ಡಾ.ರಾಜ್ ಕುಮಾರ್ ಅಭಿನಯದ 'ಬಂಗಾರದ ಮನುಷ್ಯ' ಚಿತ್ರ ಪ್ರದರ್ಶನಕ್ಕೆ ಬಾಲ ಭವನ ಸಭಾಂಗಣ ಹೌಸ್ ಫುಲ್ ಆಗಿತ್ತು. ತಮ್ಮ ಕಾಲದ ಚಿತ್ರವನ್ನು ನೋಡಿ ಹಿರಿಯರು ಸಂತಸ ಪಟ್ಟರು.
ಗತಕಾಲದ ಹಳೆಯ ಚಿತ್ರಗಳನ್ನು ನೋಡುವುದು ಒಂದು ವಿಭಿನ್ನ ಅನುಭವ ಎನ್ನುತ್ತಾರೆ ಎಪ್ಪತ್ತೊಂದರ ಹರಯದ ರಾಜಾಜಿನಗರದ ರಂಗರಾಜು. ಐವತ್ತು, ಎಪ್ಪತ್ತರ ದಶಕದಲ್ಲಿ ತೆರೆಕಂಡ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಚಿತ್ರಗಳನ್ನು ಡಿಗ್ನಿಟಿ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿದೆ.
ಚಿತ್ರ ಪ್ರದರ್ಶನದಲ್ಲಿನ ಹಳೆಯ ಕಾಲದ ವಸ್ತ್ರ ವೈಭವ, ಉಡುಗೆ ತೊಡುಗೆ , ವೇಷಭೂಷಣಗಳು ಐವತ್ತು, ಎಪ್ಪತ್ತರ ದಶಕಕ್ಕೆ ಕೊಂಡೊಯ್ಯುತ್ತವೆ. ಏಪ್ರಿಲ್ 9ರಂದು ವಿ ಶಾಂತಾರಾಂ ಅವರ 'ನವರಂಗ್' ಚಿತ್ರ ಪ್ರದರ್ಶನ ಕಾಣಲಿದೆ. ಹೆಚ್ಚಿನ ಮಾಹಿತಿಗಾಗಿ ಎನ್ ಬಿ ಜಯಪ್ರಕಾಶ್ ಅವರನ್ನು ಮೊಬೈಲ್ ಸಂಖ್ಯೆ 99020 4959 ಸಂಪರ್ಕಿಸಬಹುದು.