Don't Miss!
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- News ಲೋಕಸಭಾ ಚುನಾವಣೆ 2024: ಈ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ; ಕಾರಣವೇನು?
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೌಸ್ ಫುಲ್ ಪ್ರದರ್ಶನ ಕಂಡ 'ಬಂಗಾರದ ಮನುಷ್ಯ'
ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಭಾರತಿ ವಿಷ್ಣುವರ್ಧನ್, ಲೀಲಾವತಿ, ಆರತಿ ಹಾಗೂ ನಟ ವಿನೋದ್ ರಾಜ್ ಅವರ ಆಗಮನದಿಂದ ಕಾರ್ಯಕ್ರಮ ಮತ್ತಷ್ಟು ರಂಗೇರಿತು. ಸೃಜನಶೀಲ ನಿರ್ದೇಶಕ ರಾಮು ಕಣಗಾಲ್ ಸಹ ಉಪಸ್ಥಿತರಿದ್ದರು. ಡಿಗ್ನಿಟಿ ಚಲನಚಿತ್ರೋತ್ಸವ ಏಪ್ರಿಲ್7 ರಿಂದ 11ರವರೆಗೆ ನಡೆಯಲಿದೆ.
ಕಬ್ಬನ್ ಪಾರ್ಕ್ ನ ಬಾಲ ಭವನ ಸಭಾಂಗಣದಲ್ಲಿ 1950ರಿಂದ 1970 ರ ಅವಧಿಯಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ವರನಟ ಡಾ.ರಾಜ್ ಕುಮಾರ್ ಅಭಿನಯದ 'ಬಂಗಾರದ ಮನುಷ್ಯ' ಚಿತ್ರ ಪ್ರದರ್ಶನಕ್ಕೆ ಬಾಲ ಭವನ ಸಭಾಂಗಣ ಹೌಸ್ ಫುಲ್ ಆಗಿತ್ತು. ತಮ್ಮ ಕಾಲದ ಚಿತ್ರವನ್ನು ನೋಡಿ ಹಿರಿಯರು ಸಂತಸ ಪಟ್ಟರು.
ಗತಕಾಲದ ಹಳೆಯ ಚಿತ್ರಗಳನ್ನು ನೋಡುವುದು ಒಂದು ವಿಭಿನ್ನ ಅನುಭವ ಎನ್ನುತ್ತಾರೆ ಎಪ್ಪತ್ತೊಂದರ ಹರಯದ ರಾಜಾಜಿನಗರದ ರಂಗರಾಜು. ಐವತ್ತು, ಎಪ್ಪತ್ತರ ದಶಕದಲ್ಲಿ ತೆರೆಕಂಡ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಚಿತ್ರಗಳನ್ನು ಡಿಗ್ನಿಟಿ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿದೆ.
ಚಿತ್ರ ಪ್ರದರ್ಶನದಲ್ಲಿನ ಹಳೆಯ ಕಾಲದ ವಸ್ತ್ರ ವೈಭವ, ಉಡುಗೆ ತೊಡುಗೆ , ವೇಷಭೂಷಣಗಳು ಐವತ್ತು, ಎಪ್ಪತ್ತರ ದಶಕಕ್ಕೆ ಕೊಂಡೊಯ್ಯುತ್ತವೆ. ಏಪ್ರಿಲ್ 9ರಂದು ವಿ ಶಾಂತಾರಾಂ ಅವರ 'ನವರಂಗ್' ಚಿತ್ರ ಪ್ರದರ್ಶನ ಕಾಣಲಿದೆ. ಹೆಚ್ಚಿನ ಮಾಹಿತಿಗಾಗಿ ಎನ್ ಬಿ ಜಯಪ್ರಕಾಶ್ ಅವರನ್ನು ಮೊಬೈಲ್ ಸಂಖ್ಯೆ 99020 4959 ಸಂಪರ್ಕಿಸಬಹುದು.