Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೃಷ್ಣನಿಗೆ ನ್ಯಾಯ ಒದಗಿಸಲು ಪ್ರೇಕ್ಷಕರ ಒಕ್ಕೊರಲ ಆಗ್ರಹ
ಚಿತ್ರ ನಿರ್ದೇಶಕ ಶಶಾಂಕ್ ಪಾಲಿಗೆ ಸ್ವರ್ಗ ಮೂರೇ ಗೇಣು ಅಂತರದಲ್ಲಿದೆ. ಕೃಷ್ಣನ್ ಲವ್ ಸ್ಟೋರಿ ಅವರನ್ನು ಆ ಪರಿ ಆನಂದಗೊಳಿಸಿದೆಯಂತೆ. ಇದೀಗ ಕೃಷ್ಣನ್ ಲವ್ ಸ್ಟೋರಿ ಭಾಗ 2 ತೆಗೆಯಲು ಸಿದ್ಧತೆ ನಡೆಸಿದ್ದಾರೆ ಶಶಾಂಕ್. 'ಕೃಷ್ಣ' ಸೂಪರ್ ಹಿಟ್ ಆದ ಹುರುಪು ಮತ್ತಷ್ಟು ಹುಮ್ಮಸ್ಸಿಗೆ ಕಾರಣವಾಗಿದೆ.
ಕರ್ನಾಟಕದಾದ್ಯಂತ ಪ್ರವಾಸ ಕೈಗೊಂಡ ಕಾರಣ ಪ್ರೇಕ್ಷಕ ಧಣಿಗಳು ಕೃಷ್ಣನ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತಕಂಠದಿಂದ ವ್ಯಕ್ತಪಡಿಸಿದ್ದಾರೆ. "ಕೃಷ್ಣನಿಗೆ ಚಿತ್ರದಲ್ಲಿ ನ್ಯಾಯ ಒದಗಿಸಿಲ್ಲ. ಪ್ರೀತಿಸಿದ ಹುಡುಗಿ ಅವನಿಗೆ ಕಡೆಗೂ ಸಿಗಲಿಲ್ಲ. ಇದು ಅನ್ಯಾಯ. ಈ ಅನ್ಯಾಯವನ್ನು ಸರಿಪಡಿಸಿ" ಎಂದು ಕೃಷ್ಣನ ಪರವಾಗಿ ಧ್ವನಿ ಎತ್ತಿದ್ದಾರೆ.
ಶಶಾಂಕ್ ವಿಧಿಯಿಲ್ಲದೆ ಭಾಗ 2ರಲ್ಲಿ ಕೃಷ್ಣನಿಗೆ ನ್ಯಾಯ ಒದಗಿಸಲು ತೀರ್ಮಾನಿಸಿದ್ದಾರೆ. ಕೃಷ್ಣನ್ ಲವ್ ಸ್ಟೋರಿ ಭಾಗ 2ರಲ್ಲೂ ಅಜಯ್ ಅವರೇ ನಾಯಕರು. ತಮ್ಮ ಹಿಂದಿನ ಚಿತ್ರದ ಬಹುತೇಕ ತಾರಾಗಣ ಈ ಚಿತ್ರದಲ್ಲೂ ಇರುತ್ತದೆ. ಮೊದಲು ಚಿತ್ರಕತೆ ಸಿದ್ಧವಾಗಲಿ ಬಳಿಕ ಎಲ್ಲ ವಿವರಗಳನ್ನು ತಿಳಿಸುತ್ತೇನೆ ಎಂದು ಹೇಳಿ ಶಶಾಂಕ್ ಚಿತ್ರಕತೆ ಹೆಣೆಯಲು ಕೂತಿದ್ದಾರೆ.