twitter
    For Quick Alerts
    ALLOW NOTIFICATIONS  
    For Daily Alerts

    ಮುರಳಿಗೆ ಅಂತಿಮ ನಮನ; ಕಂಬನಿಗರೆದ ಚಿತ್ರರಂಗ

    By Rajendra
    |

    ಬರಸಿಡಿಲಿನಂತೆ ಬಂದೆರಗಿದ ಬಹುಭಾಷಾ ನಟ ಮುರಳಿ ಅವರ ಸಾವಿನ ನೋವಿನಿಂದ ತಮಿಳು ಚಿತ್ರರಂಗ ಇನ್ನೂ ಹೊರಬಂದಿಲ್ಲ. ಇಂದು ಚೆನ್ನೈನಲ್ಲಿ ಅವರ ಅಂತಿಮ ಯಾತ್ರೆ ನೆರವೇರಿತು. ಸಾವಿರಾರು ಸಂಖ್ಯೆಯ ಅಭಿಮಾನಿಗಳು, ತಮಿಳು ಚಿತ್ರರಂಗದ ಗಣ್ಯರು ಮುರಳಿಗೆ ಅಂತಿಮ ನಮನ ಸಲ್ಲಿಸಿದರು.

    ಮುರಳಿ ಅವರ ಹಠಾತ್ ನಿಧನಕ್ಕೆ ಸಂತಾಪ ಸೂಚಿಸಿ ದತಮಿಳು ಚಿತ್ರರಂಗ ಇಂದು ಸಾಂಕೇತಿಕ ಬಂದ್ ಆಚರಿಸಿ ಗೌರವ ಸೂಚಿಸಿತು. ನಟ ಮುರಳಿ ಅವರು ದಕ್ಷಿಣ ಭಾರತ ಚಲನಚಿತ್ರ ಕಲಾವಿದರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಆಗಿದ್ದರು.

    ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಮುರಳಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಅವರ ಕುಟುಂಬಿಕರನ್ನು ಸಂತೈಸಿದರು. ತಮಿಳಿನ ಬಹುತೇಕ ನಟರು ಮುರಳಿ ಅವರ ಅಂತ್ಯಕ್ರಿಯೆಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಬೆಂಗಳೂರಿನಲ್ಲಿರುವ ಮುರಳಿ ಅವರ ಬಂಧು ಮಿತ್ರರು ಇಂದು ಚೆನ್ನೈಗೆ ತೆರಳಿದರು.

    ಮುರಳಿ ಅವರು ಶ್ವಾನ ಪ್ರಿಯರಾಗಿದ್ದರು. ಅವರಿಗೆ ಶ್ವಾನಗಳೆಂದರೆ ಬಲು ಅಚ್ಚುಮೆಚ್ಚು. ಚೆನ್ನೈನ ಅವರ ಮನೆಯಲ್ಲಿ ಹತ್ತು ಶ್ವಾನಗಳನ್ನು ಅವರು ಪೋಷಿಸುತ್ತಿದ್ದರು ಎಂದರೆ ನೀವೇ ಊಹಿಸಿ ಅವರು ಪ್ರಾಣಿಗಳೆಂದರೆ ಎಷ್ಟು ಪ್ರೀತಿ ಎಂಬುದನ್ನು. ಅವರ ಮುಖಚಹರೆ ತಮಿಳು ಚಿತ್ರಗಳಿಗೆ ಹೇಳಿ ಮಾಡಿಸಿದಂತಿತ್ತು ಎಂದು ಅವರ ಜೊತೆ ನಟಿಸಿರುವ ಎಸ್ ವಿ ಶೇಖರ್ ಹೇಳಿದ್ದಾರೆ.

    Thursday, September 9, 2010, 15:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X