twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣು ತಮಿಳು ಚಿತ್ರ 'ಮರುದನಾಯಗಂ'ಗೆ ಮರುಜೀವ

    |

    ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ತಮಿಳು ಚಿತ್ರ 'ಮರುದನಾಯಗಂ' ಮತ್ತೆ ಜೀವ ಪಡೆದುಕೊಂಡಿದೆ. ಕಮಲ ಹಾಸನ್ ನಿರ್ಮಾಣ, ನಿರ್ದೇಶನದ 'ಮರುದನಾಯಗಂ' ಚಿತ್ರ ಆರ್ಥಿಕ ಕಾರಣದಿಂದ ಚಿತ್ರೀಕರಣ ನಿಲ್ಲಿಸಿತ್ತು. ಕೆಲ ವರ್ಷಗಳ ಹಿಂದೆ ಈ ಚಿತ್ರದಲ್ಲಿ ವಿಷ್ಣು ಅಭಿನಯಿಸಿದ್ದರು.

    ವಿಷ್ಣು ಅಭಿನಯದ ಭಾಗದ ಚಿತ್ರೀಕರಣ ಮುಗಿಸಿಕೊಂಡಿದ್ದ 'ಮರುದನಾಯಗಂ' ಹಣಕಾಸಿನ ಕೊರತೆಯ ಕಾರಣ ಚಿತ್ರೀಕರಣ ನಿಲ್ಲಿಸಿತ್ತು. ಇದೀಗ ಕಮಲಹಾಸನ್ ಈ ಚಿತ್ರವನ್ನು ಆದಷ್ಟು ಬೇಗ ಮುಗಿಸಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದಾರೆ. ಶೀಘ್ರದಲ್ಲೇ ಚಿತ್ರವನ್ನು ಆರಂಭಿಸುವ ಬಗ್ಗೆ ಕಮಲ್ ಸುಳಿವು ನೀಡಿದ್ದಾರೆ.

    ಇತ್ತೀಚೆಗೆ ಈ ಚಿತ್ರದ ಬಗ್ಗೆ ಮಾತನಾಡುತ್ತಿದ್ದ ಅವರು, ಸದ್ಯದ ಆರ್ಥಿಕ ಸ್ಥಿತಿಗತಿಗಳಲ್ಲಿ ಈ ಚಿತ್ರವನ್ನು ತೆರೆಗೆ ತರುವುದು ಕಷ್ಟ ಎಂದಿದ್ದರು. ಇದೀಗ ಕಮಲ್ ಮನಸ್ಸು ಬದಲಾಯಿಸಿಕೊಂಡು ಚಿತ್ರವನ್ನು ಕೈಗೆತ್ತಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ವಿಷ್ಣುವರ್ಧನ್ ಅಭಿನಯದ ತಮಿಳು ಚಿತ್ರ ಕಡೆಗೂ ಮರುಜೀವ ಪಡೆಯುವ ಕಾಲ ಸನ್ನಿಹಿತವಾಗಿದೆ.

    Saturday, January 9, 2010, 14:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X