twitter
    For Quick Alerts
    ALLOW NOTIFICATIONS  
    For Daily Alerts

    ನಿರ್ಮಾಪಕ ವರದಣ್ಣ ಇನ್ನಿಲ್ಲ : ಶೋಕದ ಕಡಲಲ್ಲಿ ರಾಜಣ್ಣ

    By Staff
    |

    ಬೆಂಗಳೂರು : ಹಿರಿಯ ನಟ ಡಾ.ರಾಜ್‌ಕುಮಾರ್‌ ಅವರ ಸಹೋದರ ಎಸ್‌.ಪಿ.ವರದರಾಜ್‌(70) ಅವರ ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ ಪುನೀತ್‌ ಫಾರ್ಮ್‌ನಲ್ಲಿ ನೆರವೇರಿತು.

    ವರದಪ್ಪ ಎಂದೇ ಕನ್ನಡ ಚಿತ್ರೋದ್ಯಮದಲ್ಲಿ ಪರಿಚಿತರಾದ ನಿರ್ಮಾಪಕ ವರದರಾಜ್‌, ಬುಧವಾರ ಹೃದಯಾಘಾತದಿಂದ ಮೃತಪಟ್ಟರು. ಪತ್ನಿ ಶಾರದಮ್ಮ ಮತ್ತು ನಾಲ್ವರು ಪುತ್ರಿಯರನ್ನು ವರದಣ್ಣ ಅಗಲಿದ್ದಾರೆ.

    ನಟರಾಗಿಯೇ ವೃತ್ತಿ ಆರಂಭಿಸಿದ ವರದರಾಜ್‌, ತಮ್ಮ ಸಹೋದರ ರಾಜ್‌ರೊಂದಿಗೆ ಗುಬ್ಬಿ ಕಂಪನಿಯಲ್ಲಿ ಕೆಲಸ ಮಾಡಿದರು. ನಂತರದ ದಿನಗಳಲ್ಲಿ ಕೃಷ್ಣಲೀಲಾ, ಸತಿಶಕ್ತಿ, ಸರ್ವಜ್ಞ ಮೂರ್ತಿ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದರು.

    ನಿರ್ಮಾಪಕ ಚಂದೂಲಾಲ್‌ ಸಹಯೋಗದೊಂದಿಗೆ ವರದರಾಜ್‌, ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರು. ಭೂಮಿಗೆ ಬಂದ ಭಗವಂತ, ನಾರದ ವಿಜಯ, ಭೂಲೋಕದಲ್ಲಿ ಯಮರಾಜ, ಭೂತಯ್ಯನ ಮಗ ಅಯ್ಯ, ಅನುರಾಗ ಅರಳಿತು, ಎರಡು ನಕ್ಷತ್ರಗಳು, ಒಡ ಹುಟ್ಟಿದವರು ಸೇರಿದಂತೆ ಅನೇಕ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದರು.

    (ದಟ್ಸ್‌ ಕನ್ನಡ ವಾರ್ತೆ)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Saturday, April 20, 2024, 16:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X