Don't Miss!
- News Lok Sabha Election 2024: ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗದ ವಿಭಿನ್ನ ಪ್ರಯತ್ನ
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರ್ಮಾಪಕ ವರದಣ್ಣ ಇನ್ನಿಲ್ಲ : ಶೋಕದ ಕಡಲಲ್ಲಿ ರಾಜಣ್ಣ
ಬೆಂಗಳೂರು : ಹಿರಿಯ ನಟ ಡಾ.ರಾಜ್ಕುಮಾರ್ ಅವರ ಸಹೋದರ ಎಸ್.ಪಿ.ವರದರಾಜ್(70) ಅವರ ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ ಪುನೀತ್ ಫಾರ್ಮ್ನಲ್ಲಿ ನೆರವೇರಿತು.
ವರದಪ್ಪ ಎಂದೇ ಕನ್ನಡ ಚಿತ್ರೋದ್ಯಮದಲ್ಲಿ ಪರಿಚಿತರಾದ ನಿರ್ಮಾಪಕ ವರದರಾಜ್, ಬುಧವಾರ ಹೃದಯಾಘಾತದಿಂದ ಮೃತಪಟ್ಟರು. ಪತ್ನಿ ಶಾರದಮ್ಮ ಮತ್ತು ನಾಲ್ವರು ಪುತ್ರಿಯರನ್ನು ವರದಣ್ಣ ಅಗಲಿದ್ದಾರೆ.
ನಟರಾಗಿಯೇ ವೃತ್ತಿ ಆರಂಭಿಸಿದ ವರದರಾಜ್, ತಮ್ಮ ಸಹೋದರ ರಾಜ್ರೊಂದಿಗೆ ಗುಬ್ಬಿ ಕಂಪನಿಯಲ್ಲಿ ಕೆಲಸ ಮಾಡಿದರು. ನಂತರದ ದಿನಗಳಲ್ಲಿ ಕೃಷ್ಣಲೀಲಾ, ಸತಿಶಕ್ತಿ, ಸರ್ವಜ್ಞ ಮೂರ್ತಿ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದರು.
ನಿರ್ಮಾಪಕ ಚಂದೂಲಾಲ್ ಸಹಯೋಗದೊಂದಿಗೆ ವರದರಾಜ್, ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರು. ಭೂಮಿಗೆ ಬಂದ ಭಗವಂತ, ನಾರದ ವಿಜಯ, ಭೂಲೋಕದಲ್ಲಿ ಯಮರಾಜ, ಭೂತಯ್ಯನ ಮಗ ಅಯ್ಯ, ಅನುರಾಗ ಅರಳಿತು, ಎರಡು ನಕ್ಷತ್ರಗಳು, ಒಡ ಹುಟ್ಟಿದವರು ಸೇರಿದಂತೆ ಅನೇಕ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್