twitter
    For Quick Alerts
    ALLOW NOTIFICATIONS  
    For Daily Alerts

    ಕುಕ್ಕಿಕಟ್ಟೆ ಅವರ ಕತೆ ಓದದವರು, ಕೊಂಕಣಿ ಚಿತ್ರ ನೋಡಿ!

    By Staff
    |

    ಮಂಗಳೂರು : ಇತ್ತೀಚೆಗೆ ನಿಧನರಾದ ಲೇಖಕ ಚಂದ್ರಶೇಖರ ಕುಕ್ಕಿಕಟ್ಟೆಯವರ ಕತೆ ಹಾಗೂ ಸಂಭಾಷಣೆಯುಳ್ಳ ಕೊಂಕಣಿ ಚಿತ್ರ ನಿರ್ಮಾಣದ ಹಂತದಲ್ಲಿದೆ.

    ಕೇವಲ 24 ಗಂಟೆಗಳಲ್ಲಿ ‘ಸೆಪ್ಟೆಂಬರ್‌ 8’ ಎಂಬ ಚಿತ್ರವನ್ನು ನಿರ್ಮಿಸಿ ಸಾಧನೆ ಮೆರೆದಿದ್ದ ರಿಚರ್ಡ್‌ ಕ್ಯಾಸ್ಟಲಿನೋ, ಈ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರು. ವರದಕ್ಷಿಣೆ ಸಮಸ್ಯೆಯ ಚಿತ್ರಣವಿರುವ ಈ ಚಿತ್ರಕ್ಕೆ ‘ಬದಿ’ ಎಂದು ಹೆಸರಿಡಲಾಗಿದೆ. ಭಾಗ್ಯಲಕ್ಷ್ಮಿ ಫಿಲಂಸ್‌ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಚಿತ್ರಕಥೆಯನ್ನು ಕ್ಯಾಸ್ಟಲಿನೋ ಅವರು ಬರೆದಿದ್ದಾರೆ.

    ‘ಓ ಗುಲಾಬಿಯೇ’ ಚಿತ್ರದಲ್ಲಿ ನಟಿಸಿದ್ದ ನವೀನ್‌, ಈ ಚಿತ್ರದ ನಾಯಕ. ಉಷಾ ಭಂಡಾರಿ, ಜಯಲಕ್ಷ್ಮಿ ಮುಂತಾದವರು ತಾರಾಗಣದಲ್ಲಿದ್ದಾರೆ.

    (ದಟ್ಸ್‌ ಕನ್ನಡ ವಾರ್ತೆ)

    Saturday, April 20, 2024, 0:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X