Don't Miss!
- News ಶಿವಮೊಗ್ಗ ಲೋಕಸಭಾ ಕ್ಷೇತ್ರ: ಶಾಂತಿಯುತ ಮತದಾನಕ್ಕಾಗಿ ಅಧಿಕಾರಿಗಳಿಗೆ ಖಡಕ್ ಸೂಚನೆ
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಕ್ಷಿತಾ-ಪ್ರೇಮ್ ವಿವಾಹಕ್ಕೆ ಅಭಿಮಾನಿಗಳ ಮಹಾಪೂರ!
ಮದುವೆಗಾಗಿ ಸಹಸ್ರಾರು ಅಭಿಮಾನಿಗಳು ಆಗಮಿಸಿದ್ದರು. ಅಭಿಮಾನಿಗಳ ನೂಕುನುಗ್ಗಲು ಉಂಟಾಗುವ ಆತಂಕದಿಂದಾಗಿ, ಕಲ್ಯಾಣ ಮಂಟಪದ ಬಾಗಿಲುಗಳನ್ನು ಮುಚ್ಚಲಾಯಿತು. ಕೇವಲ ಗಣ್ಯರಿಗೆ ಮಾತ್ರ ಪ್ರವೇಶ ನೀಡಲಾಯಿತು.
ಹೊರಗಡೆ ನಿಂತಿದ್ದ ಅಭಿಮಾನಿಗಳು, ತಾರಾಜೋಡಿಯ ವಿವಾಹ ನೋಡಲಾಗದೇ ಪರಿತಪಿಸಿದರು. ಚಿತ್ರಲೋಕದ ವಿವಿಧ ಗಣ್ಯರು ಮದುವೆಯಲ್ಲಿ ಹಾಜರಿದ್ದರು.
ಆರತಕ್ಷತೆಯಲ್ಲಿ ಅವಾಂತರ : ಗುರುವಾರ ಸಂಜೆ ಇದೇ ಕಲ್ಯಾಣಮಂಟಪದಲ್ಲಿ ನಡೆದ ರಕ್ಷಿತಾ-ಪ್ರೇಮ್ರ ಆರತಕ್ಷತೆ ಸಮಾರಂಭದಲ್ಲಿ ಅಭಿಮಾನಿಗಳ ನೂಕುನುಗ್ಗಲು ಉಂಟಾಯಿತು. ಸಂಜೆ 6ರಿಂದ ರಾತ್ರಿ 11ರ ತನಕ ಅಭಿಮಾನಿಗಳು ತಾರಾಜೋಡಿಯನ್ನು ಅಭಿನಂದಿಸಲು ಬರುತ್ತಲೇ ಇದ್ದರು. ಕೆಲಹೊತ್ತು, ರಕ್ಷಿತಾ-ಪ್ರೇಮ್ರನ್ನು ಎಳೆದಾಡಿದ ಘಟನೆಯೂ ನಡೆಯಿತು.
ಆರತಕ್ಷತೆ ಮುಗಿಯುವ ಹೊತ್ತಿಗೆ ತಾರಾಜೋಡಿಗೆ ಸುಸ್ತೋ ಸುಸ್ತು. ಅಭಿಮಾನಿಗಳ ಮಹಾಪೂರದ ಪರಿಣಾಮ, ಗಣ್ಯರು ತಾರಾಜೋಡಿಯ ಅಭಿನಂದಿಸಲು ವೇದಿಕೆಗೆ ಬರಲು ಸಾಧ್ಯವಾಗಲಿಲ್ಲ.
ಮದುವೆ ಆರತಕ್ಷತೆ ಸಮಾರಂಭದಲ್ಲಿ ವಿಷ್ಣುವರ್ಧನ್, ಭಾರತಿ, ರಾಜೇಶ್, ಉಪೇಂದ್ರ, ಅಂಬರೀಷ್, ಸುಮಲತಾ, ಬಿ.ಸಿ.ಪಾಟೀಲ್, ಕುಮಾರ್ ಬಂಗಾರಪ್ಪ, ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಆರ್.ಅಶೋಕ್, ರಾಮಚಂದ್ರಗೌಡ, ಪ್ರತಿಪಕ್ಷದ ನಾಯಕ ಎನ್.ಧರ್ಮಸಿಂಗ್ ಮತ್ತಿತರರು ಪಾಲ್ಗೊಂಡಿದ್ದರು.