twitter
    For Quick Alerts
    ALLOW NOTIFICATIONS  
    For Daily Alerts

    ಪಾನಮತ್ತ ದರ್ಶನ್ ನಿಂದ ಪತ್ನಿ ಮೇಲೆ ಹಲ್ಲೆ: ಡಿಸಿಪಿ ಸಿದ್ದರಾಮಪ್ಪ

    By Srinath
    |

    actor-darshan-inebriated-dcp-siddaramappa
    ಬೆಂಗಳೂರು, ಸೆ. 9: ಚಿತ್ರ ನಟ ದರ್ಶನ್ ಅವರು ಶುಕ್ರವಾರ ನಸುಕಿನಲ್ಲಿ ತಮ್ಮ ಪತ್ನಿ ಮತ್ತು ಪುತ್ರನ ಮಾರಣಾಂತಿಕ ಹಲ್ಲೆ ನಡೆಸುವಾಗ ಪಾನಮತ್ತರಾಗಿದ್ದರು ಎಂದು ಪಶ್ಚಿಮ ಡಿಸಿಪಿ ಸಿದ್ದರಾಮಪ್ಪ ಹೇಳಿದ್ದಾರೆ.

    ಪತ್ನಿ ವಿಜಯಲಕ್ಷ್ಮಿ ಅವರ ಸ್ನೇಹಿತೆ ವಿದ್ಯಾ ಮನೆಗೆ ನುಗ್ಗಿ ರಿವಾಲ್ವರ್ ನಿಂದ ಪ್ರಾಣ ಬೆದರಿಕೆಯೊಡ್ಡಿ, ದೈಹಿಕ ಹಲ್ಲೆ ನಡೆಸಿದ ದರ್ಶನ್ ಅವರನ್ನು ವಿಜಯನಗರ ಪೊಲೀಸರು ಶುಕ್ರವಾರ ಬೆಳಗ್ಗೆ 3 ಗಂಟೆಗೆ ಬಂಧಿಸಿದ್ದಾರೆ.

    ಬಳಿಕ ಅವರನ್ನು ವೈದ್ಯಕೀಯ ತಪಾಸಣೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ದರ್ಶನ್ ಪಾನಮತ್ತರಾಗಿ ಅಮಲಿನಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿರುವುದು ದೃಢಪಟ್ಟಿದೆ ಎಂದು ಸಿದ್ದರಾಮಪ್ಪ ಸ್ಪಷ್ಟಪಡಿಸಿದ್ದಾರೆ.

    ಐಪಿಸಿ ಸೆಕ್ಷನ್ 301, 498 ಎ, ಶಸ್ತ್ರಾಸ್ತ್ರ ಕಾಯಿದೆ ಉಲ್ಲಂಘನೆಯಡಿ ನಟ ದರ್ಶನ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತಕ್ಷಣ ಅವರನ್ನು ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. [ಫುಲ್ ಕವರೇಜ್]

    English summary
    Challenging Star, Kannada actor Darshan in an inebriated status attacked his wife Vijayalakshmi. Bangalore West DCP Siddaramappa inquiring in to the case. The jailed actor will be produced before 1st ACMM court on Monday 12th Sept.
    Monday, September 12, 2011, 11:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X