Don't Miss!
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
5ters ಮಕ್ಕಳ ಚಿತ್ರ ಹೆಮ್ಮೆಯ ವಿಷಯ, ಒಂದು ವಿಷಾದ
ಚಿತ್ರದ ಕಥೆ ಹಳೆ ಕನ್ನಡ ಮಕ್ಕಳ ಚಿತ್ರದಂತೆ ಇದೆ. ಶಾಲಾ ಪ್ರವಾಸಕ್ಕೆಂದು ಹೊರಟ ಐದು ಮಕ್ಕಳು ಕಾಡಲ್ಲಿ ತಪ್ಪಿ ಸಿಕೊಳ್ಳುತ್ತಾರೆ. ಮುಂದೆ ಮಕ್ಕಳ ಕಥೆ ಭಯ, ಕುತೂಹಲ, ಆಶ್ಚರ್ಯ, ಧೈರ್ಯ ಮತ್ತು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಸಾಗುತ್ತದೆ. 2ಡಿ ಹಾಗೂ 3ಡಿ ಚಿತ್ರದಲ್ಲಿ ಯಥೇಚ್ಛವಾಗಿ ಅನಿಮೇಷನ್ ಕೂಡಾ ಇದ್ದು ಮಕ್ಕಳ ಮನ ಗೆಲ್ಲಲಿದೆ ಎನ್ನುತ್ತಾರೆ ನಿರ್ದೇಶಕ ಜಿ ವೇಣುಗೋಪಾಲ್.
ಬಾಲ ಕಲಾವಿದರಾದ ಸಾಮ್ರಾಟ್, ಹಿತೇಶಿನಿ, ಆಕಾಶ್, ತೇಜ ಮತ್ತು ಗಗನ್ ಅವರ ನಟನೆಯನ್ನು ಹೊಗಳಿದ ಅವಿನಾಶ್, ಇಂಥ ಪ್ರಯೋಗಾತ್ಮಕ ಚಿತ್ರದಲ್ಲಿ ಅಭಿನಯಿಸಿರುವುದು ನನಗೆ ತೃಪ್ತಿಕೊಟ್ಟಿ ಎಂದಿದ್ದಾರೆ. ಹಿರಿಯ ಚಿತ್ರಕರ್ಮಿ ಕೆಎಸ್ ಎಲ್ ಸ್ವಾಮಿ ಹಾಗೂ ಮಂಜುನಾಥ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಬಿವಿ ರಾಧ ಅವರ ಅಕ್ಕನ ಮಗಳು ವಿಜಯಲಕ್ಷ್ಮಿ ಅವರು ಈ ಮಕ್ಕಳ ಚಿತ್ರಕ್ಕೆ ಸೊಗಸಾದ ಕಥೆ ಹೆಣೆದಿದ್ದಾರೆ. ಸವಾರಿ ಖ್ಯಾತಿಯ ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತ ಚಿತ್ರದ ಓಟಕ್ಕೆ ಪೂರಕವಾಗಿದೆ.
Morphosys Information Services ಸಂಸ್ಥೆ ಹೊರ ತಂದಿರುವ ಈ ಚಿತ್ರ ಈ ವಾರ ದೇಶದಾದ್ಯಂತ ಬಿಡುಗಡೆಗೊಂಡು ಜನ ಮೆಚ್ಚುಗೆ ಗಳಿಸುತ್ತಿದೆ. ಕನ್ನಡ ಮಕ್ಕಳು ಡಬ್ಬಿಂಗ್ ದೇವರ ಕೃಪೆ ಸಿಗದೆ ಹಿಂದಿ ಭಾಷೆಯಲ್ಲೇ ನೋಡಿ ಕೆಲವರು ಆನಂದಿಸಿದ್ದಾರೆ. ಮತ್ತೆ ಕೆಲವರು ಅದ್ಭುತವಾದ ದೃಶ್ಯಕಾವ್ಯ ನೋಡಿ ಭಾಷೆ ಬೇಲಿಯನ್ನು ಹಾರಿದ್ದಾರೆ.