Don't Miss!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಜರಾಸಂಧ'ನಿಂದ ಚಿಗರೆ ಐಂದ್ರಿತಾ ರೇಗೆ ಬಿಡುಗಡೆ
2011ನೇ ವರ್ಷ ಚಿಗರೆ ಕಂಕಳ ಬೆಡಗಿ ಐಂದ್ರಿತಾ ರೇಗೆ ಆರಂಭದಲ್ಲೇ ಶಾಕ್ ನೀಡಿದೆ. 'ಧೂಳ್' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಕೈಕೊಟ್ಟರು ಎಂಬ ಕಾರಣಕ್ಕೆ ಐಂದ್ರಿತಾ ಮೇಲೆ ಚಿತ್ರದ ನಿರ್ದೇಶಕ ಭರಣಿ ಕೆಂಡ ಕಾರಿದ್ದರು. ಈ ಘಟನೆ ಇನ್ನೂ ಹಸಿಯಾಗಿರುವಾಗಲೇ 'ಜರಾಸಂಧ' ಚಿತ್ರದ ಅವಕಾಶ ಐಂದ್ರಿತಾ ರೇ ಕೈತಪ್ಪಿದೆ.
'ಜರಾಸಂಧ' ಚಿತ್ರದಲ್ಲಿ ಅಭಿನಯಿಸುವ ಅವಕಾಶ 'ಪೊರ್ಕಿ' ಚಿತ್ರದಲ್ಲಿ ಅಭಿನಯಿಸಿದ್ದ ಪ್ರಣೀತಾ ಪಾಲಾಗಿದೆ. ಆದರೆ ಐಂದ್ರಿತಾ ಮೇಲಿನ ಕೋಪಕ್ಕೋ ಅಥವಾ ಆಕೆ ಇಷ್ಟವಾಗದ ಕಾರಣಕ್ಕೋ 'ಜರಾಸಂಧ' ಕೈತಪ್ಪಿಲ್ಲ. ಡೇಟ್ಸ್ ಹೊಂದಾಣಿಕೆಯಾಗದೆ ಇರುವುದೇ ಐಂದ್ರಿತಾರನ್ನು ಕೈಬಿಡಲು ಕಾರಣ ಎನ್ನಲಾಗಿದೆ. ಕೃಷ್ಣನ್ ಲವ್ ಸ್ಟೋರಿ ಖ್ಯಾತಿಯ ಶಶಾಂಕ್ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.
ಅಂದಹಾಗೆ 'ಜರಾಸಂಧ' ಚಿತ್ರದ ನಾಯಕ ನಟ ದುನಿಯಾ ವಿಜಯ್. ಸದ್ಯಕ್ಕೆ 'ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್'ನಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ. ಈ ತಿಂಗಳಲ್ಲೇ ಚಿತ್ರೀಕರಣ ಆರಂಭಿಸಬೇಕಿದ್ದ 'ಜರಾಸಂಧ' ಫೆಬ್ರವರಿಗೆ ಮುಂದೂಡಲ್ಪಟ್ಟಿದೆ. ಐಂದ್ರಿತಾ ರೇಗೆ ಅವಕಾಶ ತಪ್ಪಿದ್ದು ಹಾಗೂ ವಿಜಯ್ ಬ್ಯುಸಿಯಾಗಿರುವುದೇ 'ಜರಾಸಂಧ' ಚಿತ್ರೀಕರಣ ಮುಂದೂಡಲು ಕಾರಣವಾಗಿದೆ. [ಪ್ರಣೀತಾ]