Don't Miss!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಭೀಮಾ ತೀರದಲ್ಲಿ' ಸ್ಟೋರಿ ನಿಜಕ್ಕೂ ಯಾರ ಸ್ವತ್ತು?
"ಚಂದಪ್ಪ ಹರಿಜನ ಬಗ್ಗೆ ಮೊದಲು ಬರೆದದ್ದು ನಾನು. ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆಗೆ ಮಾಹಿತಿ, ಫೋಟೋ ಕೊಟ್ಟದ್ದೂ ನಾನೇ. ಪುಸ್ತಕದಲ್ಲಿ ಸೌಜನ್ಯಕ್ಕೂ ನನ್ನ ಹೆಸರು ಹಾಕಿಲ್ಲ" ಎಂದು ಪತ್ರಕರ್ತ ಟಿ.ಕೆ.ಮಳಗೊಂಡ ಎಂಬುವವರು ಕನ್ನಡಪ್ರಭ ಪತ್ರಿಕೆಯಲ್ಲಿ ನೇರವಾಗಿ ಆರೋಪಿಸುವ ಮೂಲಕ "ಭೀಮಾ ತೀರದ" ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ.
'ಅಪರಾಧಕ್ಕೆ ಸವಾಲು' ಎಂಬ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿರುವ ಇವರು, ಭೀಮಾ ತೀರದ ಸರಣಿ ಹತ್ಯೆಗಳ ಕುರಿತು ಮೊದಲು ವರದಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ರವಿ ಬೆಳಗೆರೆ ಅವರನ್ನು ಮಹಾನ್ ಸುಳ್ಳುಗಾರ ಎಂದು ಜರಿದಿರುವ ಮಳಗೊಂಡ, ಭೀಮಾ ತೀರದ ಹತ್ಯೆಗಳು, ಹಂತಕರನ್ನು ವಿಜೃಂಭಿಸಿ, ಅತಿರಂಜಿತ ವರದಿಗಳನ್ನು ಮಾಡಿ ಮತ್ತಷ್ಟು ರಕ್ತಪಾತ ಹೆಚ್ಚಲು ಬೆಳಗೆರೆ ಕಾರಣವಾಗಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ.
ತಮ್ಮ ವರದಿಗಳನ್ನು ತಿರುವು ಮರುವು ಮಾಡಿ ರವಿ ಬೆಳಗೆರೆ ಅವರು ತಮ್ಮ ಹಾಯ್ ಬೆಂಗಳೂರಿನಲ್ಲಿ ಪ್ರಕಟಿಸಿಕೊಂಡಿದ್ದಾರೆ. ಈಗ ಅವರು ನಾನೇ ಮೊದಲು ಪ್ರಕಟಿಸಿದ್ದು ಎಂದು ಹೇಳಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಳಗೊಂಡ ವಿಷಾದಿಸಿದ್ದಾರೆ.