Don't Miss!
- News Hubballi: ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ: ನೇಹಾ ನಿವಾಸಕ್ಕೆ ಶ್ರೀಗಳು, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಪೊಲೀಸ್ ಅಭಯ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದು ಕಾಲದಲ್ಲಿ ನಿರ್ದೇಶಕ ಈಗ ಠಕ್ಕ ಬಿಟ್ಟರೆ ಸಿಕ್ಕ
ಒಂದು ಕಾಲದಲ್ಲಿ ಈತ ಚಲನಚಿತ್ರ ನಿರ್ದೇಶಕ. ಒಂದು ಚಿತ್ರಕ್ಕೂ ಆಕ್ಷನ್, ಕಟ್ ಹೇಳಿದ್ದಾಯಿತು. ಆ ಚಿತ್ರ ಬಾಕ್ಸಾಫೀಸಲ್ಲಿ ತೋಪೆದ್ದು ಹೋಗಿತ್ತು. ಆತನ ಜೊತೆ ಚಿತ್ರ ನಿರ್ಮಿಸಲು ಯಾವೊಬ್ಬ ನಿರ್ಮಾಪಕನು ಮುಂದೆ ಬರಲಿಲ್ಲ. ಕಡೆಗೆ ಬೇಸತ್ತು ಆತ ಚಿತ್ರ ನಿರ್ದೇಶನವನ್ನು ಮಾಡಲಾಗದೆ ಹೊಟ್ಟೆ ಪಾಡಿಗೆ ಕೆಲಸವೊಂದನ್ನು ಹುಡುಕಿಕೊಳ್ಳಲಾದಂತಹ ದುಸ್ಥಿತಿಗೆ ತಲುಪಿದ.
ಇದು ಯಾವುದೋ ಚಿತ್ರದ ಕಥೆಯಲ್ಲ. ನಿಜಜೀವನದಲ್ಲಿ ನಡೆದ ನೈಜ ಕಥೆಯಿದು.ನಿರ್ದೇಶಕನ ಹೆಸರು ವಿ ವಿ ನಾರಾಯಣ್. ಕೆಲತಿಂಗಳ ಹಿಂದೆ ಈತ ಹೈದರಾಬಾದ್ ನ ಕೂಕಟ್ ಪಲ್ಲಿಯ ಮನೆಯೊಂದಕ್ಕೆ ನುಗ್ಗಿ ಕಳ್ಳತನ ಮಾಡಿದ್ದಾನೆ. ಗೋಡೆ ಹಾರಿ ಕೆಳಗೆ ಬಿದು ಕಾಲು ಮುರಿದುಕೊಂಡು ಮಾಲು ಸಮೇತ ಸಿಕ್ಕಿಬಿದ್ದಿದ್ದಾನೆ.
ತೆಲುಗಿನಲ್ಲಿ ಈತ 'ಜಲ್ಲು' ಎಂಬ ಚಿತ್ರವನ್ನು ನಿರ್ದೇಶಿಸಿದ್ದ. ಆ ಚಿತ್ರ ಬಾಕ್ಸಾಫೀಸಲ್ಲಿ ಹೇಳಹೆಸರಿಲ್ಲದಂತೆ ನಾಪತ್ತೆಯಾಗಿತ್ತು. ಈತನಿಗೋ ಚಿತ್ರ ನಿರ್ದೇಶನ ಬಿಟ್ಟ್ಟರೆ ಇನ್ನೊಂದು ವಿದ್ಯೆ ಗೊತ್ತಿರಲಿಲ್ಲವಂತೆ. ಈತನಲ್ಲಿನ ತುಡುಗು ಬುದ್ಧಿ ಜಾಗೃತಗೊಂಡು ಕಳ್ಳನಾಗಿ ಬದಲಾಗಿದ್ದಾನೆ. ಠಕ್ಕ ಬಿಟ್ಟರೆ ಸಿಕ್ಕ ಎಂಬಾತಾಗಿದೆ ಈತನ ಪರಿಸ್ಥಿತಿ.