Don't Miss!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದು ಕಾಲದಲ್ಲಿ ನಿರ್ದೇಶಕ ಈಗ ಠಕ್ಕ ಬಿಟ್ಟರೆ ಸಿಕ್ಕ
ಒಂದು ಕಾಲದಲ್ಲಿ ಈತ ಚಲನಚಿತ್ರ ನಿರ್ದೇಶಕ. ಒಂದು ಚಿತ್ರಕ್ಕೂ ಆಕ್ಷನ್, ಕಟ್ ಹೇಳಿದ್ದಾಯಿತು. ಆ ಚಿತ್ರ ಬಾಕ್ಸಾಫೀಸಲ್ಲಿ ತೋಪೆದ್ದು ಹೋಗಿತ್ತು. ಆತನ ಜೊತೆ ಚಿತ್ರ ನಿರ್ಮಿಸಲು ಯಾವೊಬ್ಬ ನಿರ್ಮಾಪಕನು ಮುಂದೆ ಬರಲಿಲ್ಲ. ಕಡೆಗೆ ಬೇಸತ್ತು ಆತ ಚಿತ್ರ ನಿರ್ದೇಶನವನ್ನು ಮಾಡಲಾಗದೆ ಹೊಟ್ಟೆ ಪಾಡಿಗೆ ಕೆಲಸವೊಂದನ್ನು ಹುಡುಕಿಕೊಳ್ಳಲಾದಂತಹ ದುಸ್ಥಿತಿಗೆ ತಲುಪಿದ.
ಇದು ಯಾವುದೋ ಚಿತ್ರದ ಕಥೆಯಲ್ಲ. ನಿಜಜೀವನದಲ್ಲಿ ನಡೆದ ನೈಜ ಕಥೆಯಿದು.ನಿರ್ದೇಶಕನ ಹೆಸರು ವಿ ವಿ ನಾರಾಯಣ್. ಕೆಲತಿಂಗಳ ಹಿಂದೆ ಈತ ಹೈದರಾಬಾದ್ ನ ಕೂಕಟ್ ಪಲ್ಲಿಯ ಮನೆಯೊಂದಕ್ಕೆ ನುಗ್ಗಿ ಕಳ್ಳತನ ಮಾಡಿದ್ದಾನೆ. ಗೋಡೆ ಹಾರಿ ಕೆಳಗೆ ಬಿದು ಕಾಲು ಮುರಿದುಕೊಂಡು ಮಾಲು ಸಮೇತ ಸಿಕ್ಕಿಬಿದ್ದಿದ್ದಾನೆ.
ತೆಲುಗಿನಲ್ಲಿ ಈತ 'ಜಲ್ಲು' ಎಂಬ ಚಿತ್ರವನ್ನು ನಿರ್ದೇಶಿಸಿದ್ದ. ಆ ಚಿತ್ರ ಬಾಕ್ಸಾಫೀಸಲ್ಲಿ ಹೇಳಹೆಸರಿಲ್ಲದಂತೆ ನಾಪತ್ತೆಯಾಗಿತ್ತು. ಈತನಿಗೋ ಚಿತ್ರ ನಿರ್ದೇಶನ ಬಿಟ್ಟ್ಟರೆ ಇನ್ನೊಂದು ವಿದ್ಯೆ ಗೊತ್ತಿರಲಿಲ್ಲವಂತೆ. ಈತನಲ್ಲಿನ ತುಡುಗು ಬುದ್ಧಿ ಜಾಗೃತಗೊಂಡು ಕಳ್ಳನಾಗಿ ಬದಲಾಗಿದ್ದಾನೆ. ಠಕ್ಕ ಬಿಟ್ಟರೆ ಸಿಕ್ಕ ಎಂಬಾತಾಗಿದೆ ಈತನ ಪರಿಸ್ಥಿತಿ.