Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಹೆಂಡ್ತೀರ್ ದರ್ಬಾರ್' ಮೂಲಕ ಮೀನಾ ರೀ ಎಂಟ್ರಿ
ಮದುವೆಯ ಬಳಿಕ ಕಾಣೆಯಾಗಿದ್ದ ನಟಿ ಮೀನಾ ಕನ್ನಡ ಚಿತ್ರವೊಂದರ ಮೂಲಕ ಮತ್ತೆ ಪ್ರತ್ಯಕ್ಷವಾಗಿದ್ದಾರೆ. 'ಹೆಂಡ್ತೀರ್ ದರ್ಬಾರ್' ಎಂಬ ಚಿತ್ರದ ಮೂಲಕ ಮೀನಾ ಮತ್ತೆ ಬಣ್ಣ ಹಚ್ಚ್ಚಿ ಕೊಂಡಿದ್ದಾರೆ. 'ಗಂಡಂದ್ರೆ ಹುಷಾರ್' ಎಂಬುದು ಈ ಚಿತ್ರದ ಅಡಿಬರಹ.
ಮದುವೆಯಾದ ಬಳಿಕ ಮೀನಾ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು ನಾಯಕ ನಟನಾಗಿ ರಮೇಶ್ ಅರವಿಂದ್ ಕಾಣಿಸಲಿದ್ದಾರೆ.ಅಂದಹಾಗೆ ಈ ಚಿತ್ರ ತಮಿಳಿನ 'ವರವು ಎತ್ತಣ ಸೆಲವು ಪತ್ತಣ' ಚಿತ್ರದ ರೀಮೇಕ್. ತಮಿಳಿನಲ್ಲಿ ನಾಜರ್, ರಾಧಿಕಾ, ಗೌಂಡುಮಣಿ, ಸೆಂಥಿಲ್, ವಡಿವೇಲು ಮುಂತಾದವರು ನಟಿಸಿದ್ದರು. ಸುಮಾರು ಹನ್ನೆರಡು ವರ್ಷಗಳ ಹಿಂದೆ ತೆರೆಕಂಡ ಚಿತ್ರ ಇದಾಗಿದೆ.
ಈ ಹಿಂದೆ ಮೀನಾ ಮತ್ತು ರಮೇಶ್ ಅರವಿಂದ್ ತಮಿಳಿನಲ್ಲಿ ನಟಿಸಿದ್ದರು. ಆದರೆ ಕನ್ನಡದಲ್ಲಿ ಇವರಿಬ್ಬರೂ ಜತೆಯಾಗಿ ನಟಿಸುತ್ತಿರುವುದು ಇದೇ ಮೊದಲು. ಇದೊಂದು ಹಾಸ್ಯ ಪ್ರಧಾನ ಚಿತ್ರವಾಗಿದ್ದು, 'ಒಂದು ರುಪಾಯಿ ಆದಾಯ ಒಂದೂವರೆ ರುಪಾಯಿ ಖರ್ಚು' ಎಂಬುದು ಚಿತ್ರದ ಒನ್ ಲೈನ್ ಕತೆ.
ರಂಗಾಯಣ ರಘು, ಸಾಧುಕೋಕಿಲ ನಟನೆಯಿದ್ದು ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ತಮಿಳಿನಲ್ಲಿ 'ವರವು ಎತ್ತ್ತಣ ಸೆಲವು ಪತ್ತಣ' ನಿರ್ದೇಶಿಸಿದ್ದ ವಿ.ಶೇಖರ್ ಈ ಚಿತ್ರವನ್ನು ಕನ್ನಡಲ್ಲೂ ನಿರ್ದೇಶಿಸುತ್ತಿರುವುದು ವಿಶೇಷ. ಸುದೀಪ್ ಜತೆ 'ಮೈ ಆಟೋಗ್ರಾಫ್' ಮೀನಾ ನಟಿಸಿದ್ದ ಕನ್ನಡದ ಕೊನೆಯ ಚಿತ್ರ. ಇದೀಗ ಮತ್ತೊಂದು ರೀಮೇಕ್ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ ಮೀನಾ.
(ದಟ್ಸ್ ಕನ್ನಡ ಚಿತ್ರವಾರ್ತೆ)