ಮೂವತ್ತು ಕೋಟಿ ರು. ಬೆಲೆ ಬಾಳುವ ನಟ ದರ್ಶನ್

ದರ್ಶನ್ ಪರಿಸ್ಥಿತಿ ಹೀಗಾದ ಹಿನ್ನೆಲೆಯಲ್ಲಿ ತೀರಾ ಆತಂಕಕ್ಕೆ ಒಳಗಾಗಿರುವ ನಿರ್ಮಾಪಕ ಎಂದರೆ ಆನಂದ್ ಅಪ್ಪುಗೋಳ್. ಅವರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ಮೇಲೆ ರು.12 ಕೋಟಿ ಬಂಡವಾಳ ಹೂಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಐತಿಹಾಸಿಕ ಚಿತ್ರದ ಚಿತ್ರೀಕರಣ ಶೇ.80ರಷ್ಟು ಮುಗಿದಿದೆ.
'ಚಿಂಗಾರಿ' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. ಬಿ ಮಹದೇವ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಹರ್ಷ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ. ಸದ್ಯಕ್ಕೆ 'ಚಿಂಗಾರಿ' ಚಿತ್ರೀಕರಣ ಮುಂದೂಡಲ್ಪಟ್ಟಿದೆ.
ಇತ್ತೀಚೆಗೆ ಅದ್ದೂರಿಯಾಗಿ ಸೆಟ್ಟೇರಿದ 'ವಿರಾಟ್' ಚಿತ್ರದ ಕತೆ ಕೇಳುವಂತಿಲ್ಲ. ಇದಿಷ್ಟೇ ಅಲ್ಲದೆ ಇನ್ನೂ ಅನೇಕ ನಿರ್ಮಾಪಕರು ದರ್ಶನ್ ಅವರಿಗೆ ಅಡ್ವಾನ್ಸ್ ಹಣ ನೀಡಿದ್ದಾರೆ. ಅವರೆಲ್ಲಾ ಕೈಯಲ್ಲಿ ಜೀವಹಿಡಿದು ಆಕಾಶ ನೋಡುವಂತಾಗಿದೆ. ಅಡ್ವಾನ್ಸ್ ನೀಡಿದವರಲ್ಲಿ ಮಹೇಶ್ ಸುಖಧರೆ ಹೆಸರು ಪ್ರಮುಖವಾಗಿದೆ.
ಇವರೆಲ್ಲಾ ವಿಲವಿಲ ಒದ್ದಾಡುತ್ತಿದ್ದರೆ ಕೇರ್ ಫ್ರೀಯಾಗಿರುವವರು ಮಾತ್ರ ಎಂಡಿ ಶ್ರೀಧರ್. ಅವರ 'ಬುಲ್ ಬುಲ್' ಚಿತ್ರಕ್ಕೆ ದರ್ಶನ್ ಯಾವುದೇ ಸಂಭಾವನೆ ಪಡೆದಿಲ್ಲವಂತೆ. ಅವರೊಬ್ಬರೇ ಸದ್ಯಕ್ಕೆ ಸೇಫ್. ಇನ್ನು ಸುದೀರ್ಘ ಸಮಯದಿಂದ ಸೆಟ್ಸ್ನಲ್ಲೇ ಇದ್ದ ಸಾರಥಿ ಚಿತ್ರಕ್ಕೆ ಬಿಡುಗಡೆ ಮೋಕ್ಷ ಸಿಕ್ಕಿದ್ದು ಅವರ ನಿರ್ಮಾಪಕ ಕೆ ಸಿ ಎನ್ ಚಂದ್ರಶೇಖರ್ ತಲೆಮೇಲಿನ ಭಾರ ಇಳಿದಂತಾಗಿದೆ. (ಏಜೆನ್ಸೀಸ್)


Click it and Unblock the Notifications











