Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದ ಕಮಲಹಾಸನ್ ರಮೇಶ್ಗೆ ಹುಟ್ಟುಹಬ್ಬ
ನಟ ದರ್ಶನ್ ಅವರ ಗಲಾಟೆಯಲ್ಲಿ ಇಡೀ ಕನ್ನಡ ಚಿತ್ರರಂಗವೇ ಕಳೆದುಹೋಗಿದೆ. ಆದರೆ ವಿವಾದ ರಹಿತ ನಟ ರಮೇಶ್ ಅರವಿಂದ್ ತಮ್ಮ ಹುಟ್ಟುಹಬ್ಬವನ್ನು ಶನಿವಾರ(ಸೆ.10) ಸರಳವಾಗಿ ಆಚರಿಸಿಕೊಂಡರು. ರಮೇಶ್ ಅರವಿಂದ್ ಅವರು ಇಂದು 47ನೇ ವರ್ಷಕ್ಕೆ ಅಡಿಯಿಟ್ಟರು.
ಕೇವಲ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲದೆ ಪಕ್ಕದ ತಮಿಳು, ತೆಲುಗು ಚಿತ್ರರಂಗಗಳಲ್ಲೂ ರಮೇಶ್ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಒಂಭತ್ತು ಶತದಿನೋತ್ಸ್ಸವ ಆಚರಿಸಿಕೊಂಡ ಚಿತ್ರಗಳನ್ನು ಕೊಟ್ಟಂತಹ ಅಪರೂಪದ ನಟ ರಮೇಶ್. ಕೇವಲ ನಟನೆಯಲ್ಲಷ್ಟೇ ಅಲ್ಲದೆ ನಿರ್ದೇಶನದಲ್ಲೂ ತನ್ನದೇ ಆದ ಛಾಪು ಮೂಡಿಸಿದ ಕಲಾವಿದ.
ರಮೇಶ್ ಕತೆ ಚಿತ್ರಕತೆ ರಚನೆಯಲ್ಲೂ ಒಂದು ಕೈ ಆಡಿಸಿ ಸೈ ಎನ್ನಿಸಿಕೊಂಡವರು. ಹೂಮಳೆ, ಅಮೃತಧಾರೆ ಹಾಗೂ ಆಕ್ಸಿಡೆಂಟ್ ಚಿತ್ರಗಳಿಗೆ ರಮೇಶ್ ಕತೆ ಹೆಣೆದು ಗೆದ್ದಿದ್ದಾರೆ. ಗಂಭೀರ ಪಾತ್ರಗಳೇ ಇರಲಿ ಕಾಮಿಡೇ ರೋಲೇ ಇರಲಿ ರಮೇಶ್ ಲೀಲಾಜಾಲವಾಗಿ ಒಗ್ಗಿಕೊಳ್ಳುತ್ತಾರೆ. ತಮಿಳಿಗೆ ಕಮಲ ಹಾಸನ್ ಹೇಗೋ ಕನ್ನಡಕ್ಕೆ ರಮೇಶ್ ಅರವಿಂದ್ ಹಾಗೆ.
ಕಸ್ತೂರಿ ವಾಹಿನಿಯ 'ಪ್ರೀತಿಯಿಂದ ರಮೇಶ್' ಹಾಗೂ ಈಟಿವಿ ಕನ್ನಡದಲ್ಲಿ 'ರಾಜ ರಾಣಿ ರಮೇಶ್' ಎಂಬ ಗೇಮ್ ಶೋ ಮೂಲಕ ತಮ್ಮ ಅಭಿಮಾನಿಗಳಿಗೆ ಇನ್ನೂ ಹತ್ತಿರವಾದ ನಟ. ರಮೇಶ್ ಅರವಿಂದ್ ನಿರ್ದೇಶಿಸುತ್ತಿರುವ ಐದನೇ ಚಿತ್ರ 'ನಮ್ಮಣ್ಣ ಡಾನ್'. ಇಂದು ಈ ಚಿತ್ರತಂಡದೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ವಿಕ್ರಮ್ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಆಚರಿಸಿಕೊಂಡರು. ಅವರಿಗೆ ನಿಮ್ಮ ಕಡೆಯಿಂದ ಒಂದು ಸಣ್ಣ ಗಿಫ್ಟ್ ಇಲ್ವಾ! (ದಟ್ಸ್ಕನ್ನಡ ಸಿನಿವಾರ್ತೆ)