Don't Miss!
- Technology SmartGlass: ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್ ಬಳಕೆದಾರರು ಇನ್ಮುಂದೆ ವಿಡಿಯೋ ಕಾಲ್ ಮಾಡಬಹುದು!
- Automobiles ಕ್ರ್ಯಾಶ್ ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ ಮಧ್ಯಮ ವರ್ಗದ ಮೆಚ್ಚಿನ ಸ್ವದೇಶಿ ಕಾರು
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- News ಮೋದಿ ಯಾರ ಪರ; ಪ್ರಧಾನಿಯಾಗಿ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದು ಯಾರದ್ದು? ಸಿದ್ದರಾಮಯ್ಯ
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Lifestyle Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣು ಕುರಿತ ಅಪರೂಪದ ಕೃತಿ ಸ್ನೇಹ ಸಂಪತ್ತು
ಸಾಹಸಸಿಂಹ ವಿಷ್ಣುವರ್ಧನ್ ಕುರಿತ ಅಪರೂದ ಈ ಪುಸ್ತಕ ಗೆಳೆತನಕ್ಕೆ ಅನ್ವರ್ಥಕ. ರವಿವಾರ ವಿಷ್ಣು ಅವರ ಜೀವನ ಚರಿತ್ರೆ "ಸ್ನೇಹ ಸಂಪತ್ತು" ಪುಸ್ತಕ ಲೋಕಾರ್ಪಣೆ ಮಾಡಲಾಯಿತು.ಬಸವನಗುಡಿ ನ್ಯಾಷನಲ್ ಕಾಲೇಜಿನ ಗಾಂಧಿ ನೆಹರು ಸಭಾಂಗಣದಲ್ಲಿ ಭಾರತಿ ವಿಷ್ಣುವರ್ಧನ್ ಅವರು ಕೃತಿಯನ್ನು ಬಿಡುಗಡೆ ಮಾಡಿದರು.
ಕೃತಿ ಬಿಡುಗಡೆ ಬಳಿಕ ಅವರು ಮಾತನಾಡುತ್ತಾ, ವಿಷ್ಣುವರ್ಧನ್ ಅವರೊಂದಿಗೆ ಹಲವು ಹಿರಿಯ ಕಲಾವಿದರು ಕಳೆದ ಮಧುರ ನೆನಪುಗಳು ಪುಸ್ತಕದಲ್ಲಿ ದಾಖಲಾಗಿವೆ. ವಿಷ್ಣು ಅವರ ಪ್ರೀತಿ, ಅನುಭವಗಳನ್ನು ದಾಖಲಿಸಿದ ಅವರ ಸ್ನೇಹಿತರು ನಿಜಕ್ಕೂ ಸ್ನೇಹವನ್ನು ಮೆರೆದಿದ್ದಾರೆ. ಅವರ ನೆನಪು ಹಾಗೂ ನಿಮ್ಮ ಸ್ನೇಹ ಚಿರಾಯುವಾಗಲಿ ಎಂದರು.
ನಟ ಎಂ ಕೆ ಸುಂದರರಾಜ್ ಮಾತನಾಡುತ್ತಾ, ಬದುಕಿನಲ್ಲಿ ಏನೆಲ್ಲಾ ಇದ್ದರೂ ಸ್ನೇಹಿತರಿಲ್ಲದೆ ನೆಮ್ಮದಿ ಸಿಗುವುದಿಲ್ಲ. ಕುಮಾರ್(ವಿಷ್ಣು) ನಮ್ಮೊಂದಿಗಿಲ್ಲ.ಆದರೆ ಅವರು ತೋರಿದ ಸ್ನೇಹ, ಪ್ರೀತಿ ಇನ್ನೂ ನಮ್ಮಲ್ಲಿ ಬೆಚ್ಚಗಿದೆ. ಕನ್ನಡ ಚಿತ್ರರಂಗಲ್ಲೇ ವಿಷ್ಣು ಅವರು ಸ್ಫುರದ್ರೂಪಿ ಹಾಗೂ ಆಕರ್ಷಕ ನಟ. ಕಷ್ಟ, ಸುಖ ಎಲ್ಲವನ್ನೂ ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದರು. ಹಾಗಾಗಿಯೆ ಅವರು 'ಸ್ನೇಹಲೋಕ'ವನ್ನು ಸ್ಥಾಪಿಸಿದ್ದು ಎಂದರು.
ಕೃತಿ ಬಿಡುಗಡೆ ಸಮಾರಂಭಕ್ಕೆ ಸಿನಿಮಾ ತಾರೆಗಳಿಗಿಂತ ಅಧಿಕ ಸಂಖ್ಯೆಯಲ್ಲಿ ವಿಷ್ಣು ಅಭಿಮಾನಿಗಳು ಆಗಮಿಸಿದ್ದರು. ವಿಷ್ಣು ಅಭಿಮಾನಿಗಳು ತಾವು ಕೊಂಡ ಪುಸ್ತಕಕ್ಕೆ ಭಾರತಿ ಅವರ ಹಸ್ತಾಕ್ಷರ ಪಡೆದು ಸಂತಸ ಪಟ್ಟರು. ದೂರದರ್ಶನ ಕೇಂದ್ರದ ಹಿರಿಯ ನಿರ್ದೇಶಕ ಡಾ.ಮಹೇಶ್ ಜೋಶಿ, ನಟ ಕೂದವಳ್ಳಿ ಚಂದ್ರಶೇಖರ್, ಕೃತಿಯ ಲೇಖಕ ಎಂ ನರಸಿಂಹಮೂರ್ತಿ, ಕಾಲೇಜಿನ ಪ್ರಾಂಶುಪಾಲೆ ಡಾ.ಎಂ ಲೀಲಾವತಿ ಮುಂತಾದವರು ಉಪಸ್ಥಿತರಿದ್ದರು.