Don't Miss!
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಲ್ಕು ವರ್ಷದ ಬಳಿಕ ‘ದುರ್ಗಿ’ ಬರುತ್ತಿದ್ದಾಳೆ !
- ದಟ್ಸ್ಕನ್ನಡ ಡೆಸ್ಕ್
ಮಾಲಾಶ್ರೀ ಅಭಿನಯದ ‘ದುರ್ಗಿ’ ಚಿತ್ರದ ಚಿತ್ರೀಕರಣ ಈಗ ಪೂರ್ಣಗೊಂಡಿದ್ದು , ಸದ್ಯದಲ್ಲೇ ‘ದುರ್ಗಿ’ ತೆರೆಗೆ ಬರಲಿದೆ. ನಾಲ್ಕು ವರ್ಷಗಳ ಹಿಂದೆ ತೆರೆಕಂಡಿದ್ದ ‘ಚಾಮುಂಡಿ’ಯ ನಂತರ ಮಾಲಾಶ್ರೀ ಮತ್ತೆ ಬಣ್ಣ ಹಚ್ಚಿರಲಿಲ್ಲ . ಮಾಲಾಶ್ರೀ ಅವರ ಪುನರವತಾರದ ‘ದುರ್ಗಿ’ ಚಿತ್ರದ ಕುರಿತು ಆಕೆಗೆ ಅಪಾರ ವಿಶ್ವಾಸವಿದೆ.
‘ದುರ್ಗಿ’ಗಾಗಿ 145 ದಿನಗಳ ಚಿತ್ರೀಕರಣ ನಡೆದಿದೆ. ಮಾಲಾಶ್ರೀ ಅವರ ಪತಿ ರಾಮು ಅವರೇ ಚಿತ್ರವನ್ನು ನಿರ್ಮಿಸಿದ್ದು , ರಾಮು ಅವರ ಟೇಸ್ಟ್ ಚಿತ್ರದ ಪ್ರತಿ ಫ್ರೇಂನಲ್ಲೂ ಇದೆ ಎನ್ನಲಾಗಿದೆ. ರಾಮು ನಿರ್ಮಾಣದ ಚಿತ್ರಗಳಲ್ಲಿ ‘ಎಕೆ-47’ ನಂತರದ ಭಾರೀ ಬಜೆಟ್ಟಿನ ಚಿತ್ರ ಎನ್ನುವ ಅಗ್ಗಳಿಕೆ ‘ದುರ್ಗಿ’ಗೆ ಸಂದಿದೆ.
ಚಿತ್ರದ ಹೈಲೈಟ್ ಎಂದರೆ ಸಾಹಸ ದೃಶ್ಯಗಳು. ಸಾಹಸ ದೃಶ್ಯಗಳಲ್ಲಿ ಮಾಲಾಶ್ರೀ ಅತ್ಯಂತ ನೈಜವಾಗಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗ ಹಿಂದೆಂದೂ ಕಂಡಿರದ ಸಾಹಸ ದೃಶ್ಯಗಳು ದುರ್ಗಿ ಯಲ್ಲಿವೆ ಎನ್ನುತ್ತಾರೆ ಕಥೆ ಹಾಗೂ ಚಿತ್ರಕಥೆ ಬರೆದಿರುವ ಯುವ ನಿರ್ದೇಶಕ ಪಿ.ರವಿಶಂಕರ್.
ರಾಮು ನಿರ್ಮಾಣದ, ರವಿಚಂದ್ರನ್ ಅಭಿನಯದ ‘ಮಲ್ಲ’ ಚಿತ್ರ ಆರಂಭಿಕ ಯಶಸ್ಸು ಕಂಡಿದೆ. ಈ ಯಶಸ್ಸಿನಿಂದ ಉತ್ತೇಜಿರಾಗಿರುವ ರಾಮು ‘ದುರ್ಗಿ’ಯ ಕುರಿತೂ ಅಪಾರ ವಿಶ್ವಾಸ ಹೊಂದಿದ್ದಾರೆ.
ದುರ್ಗಿ ಗೆಲ್ಲಲಿ ; ಆ ಗೆಲುವು ಗಾಂಧಿನಗರದ ಪಾಲಿಗೆ ಟಾನಿಕ್ಕಾಗಲಿ !
ಮುಖಪುಟ / ಸ್ಯಾಂಡಲ್ವುಡ್