twitter
    For Quick Alerts
    ALLOW NOTIFICATIONS  
    For Daily Alerts

    ಭಾಗ್ಯದ ಬಳೆಗಾರನಾಗಿ ಶಿವರಾಜ್ ಕುಮಾರ್

    By Staff
    |

    Shivraj Kumar
    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೊಸ ಚಿತ್ರ 'ಭಾಗ್ಯದ ಬಳೆಗಾರ' ನವೆಂಬರ್ 14ರಂದು ಸೆಟ್ಟೇರಲಿದೆ. ನಂದ ಲವ್ಸ್ ನಂದಿತಾ ಚಿತ್ರದ ನಿರ್ಮಾಪಕ ರಮೇಶ್ ಕಶ್ಯಪ್ ತಮ್ಮ ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಾಯಿ ಪ್ರಕಾಶ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇಳಯರಾಜ ಸಂಗೀತ ಸಂಯೋಜಿಸಲಿದ್ದಾರೆ.

    ಸುಮಧುರ ಗೀತೆಗಳು, ಗ್ರಾಮೀಣ ನೇಪಥ್ಯ ಈ ಚಿತ್ರದ ಪ್ಲಸ್ ಪಾಯಿಂಟ್.ಅಪಾರ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 'ಭಾಗ್ಯದ ಬಳೆಗಾರ' ಮೇಲುಕೋಟೆ, ಕೊಳ್ಳೆಗಾಲ, ಮಂಡ್ಯ, ಮೈಸೂರಿನಲ್ಲಿ 75 ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಈ ಸುಂದರ ಸ್ಥಳಗಳ ಪ್ರಕೃತಿ ಸೊಬಗನ್ನು ಪಿಕೆಎಚ್ ದಾಸ್ ತಮ್ಮ ಕ್ಯಾಮೆರಾ ಕಣ್ಣಲ್ಲಿ ಬಂಧಿಸಲಿದ್ದಾರೆ.

    ತವರಿನ ಸಿರಿ, ತವರಿಗೆ ಬಾ ತಂಗಿ, ತವರಿನ ತೊಟ್ಟಿಲು ಹಾಗೂ ನಂದಾ ಲವ್ಸ್ ನಂದಿತಾ ಯಶಸ್ವಿ ಚಿತ್ರಗಳಿಗೆ ಕಥೆ ಒದಗಿಸಿದ್ದ ಅಜಯ್ ಕುಮಾರ್ ಈ ಚಿತ್ರಕ್ಕೂ ಕಥೆ, ಚಿತ್ರಕಥೆ ಬರೆದಿದ್ದಾರೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ನಾಗೇಂದ್ರ ಪ್ರಸಾದ್, ಆನಂದ್ ಗೀತರಚನೆ ಹಾಗೂ ಪಿ.ಆರ್.ಸೌಂದರರಾಜ್ ಸಂಕಲನ ಈ ಚಿತ್ರಕ್ಕಿದೆ. ಚಿತ್ರದ ಉಳಿದ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
    (ದಟ್ಸ್ ಕನ್ನಡ ಚಿತ್ರವಾರ್ತೆ)

    Monday, November 10, 2008, 18:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X