Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ದರ್ಶನ್ ಜೊತೆಯಾದ ಪೊರ್ಕಿ ಪ್ರಣೀತಾ!
ಗೀತಸಾಹಿತಿ ರಾಮ್ ನಾರಾಯಣ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ 'ಸ್ನೇಹಿತರು' ಚಿತ್ರಕ್ಕೆ ಮೊದಲು ಕೇಳಿಬಂದ ಹೆಸರು ರಮ್ಯಾ ಅಥವಾ ತ್ರಿಶಾ. ಆದರೆ ಡೇಟ್ಸ್ ಸಮಸ್ಯೆಯಿಂದಾಗಿ ಅದು ಪ್ರಣೀತಾ ಕೈಸೇರಿದೆ. ಈ ಚಿತ್ರದಲ್ಲಿ ಐದು ಜನ ಹೀರೋಗಳು. ಅವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಪ್ರಮುಖ ಆಕರ್ಷಣೆ. ಅವರದು ಅತಿ ಪ್ರಮುಖ ಅತಿಥಿ ಪಾತ್ರವಂತೆ.
ಉಳಿದಂತೆ ವಿಜಯ ರಾಘವೆಂದ್ರ, ತರುಣ್, ಸೃಜನ್ ಲೋಕೇಶ್ ಹಾಗೂ ರವಿಶಂಕರ್ (ಪಯಣ), ಹೀರೋಗಳು. ಈ ಸ್ಟಾರ್ ಮತ್ತು ಮಲ್ಟಿ ಹೀರೋಗಳ ಚಿತ್ರಗಳನ್ನು ನಿರ್ಮಿಸುತ್ತಿರುವವರು ಸೌಂದರ್ಯಾ ಜಗದೀಶ್. ಈ ಮೊದಲು 'ಮಸ್ತ್ ಮಜಾ ಮಾಡಿ' ಎಂಬ ಇದೇ ಮಾದರಿಯ 'ಹಿಟ್' ಸಿನಿಮಾ ಕೊಟ್ಟಿದ್ದರು. ಈಗಾಗಲೇ 'ಅಪ್ಪು-ಪಪ್ಪು' ಮೂಲಕ ಜನರಿಗೆ ಪರಿಚಿತವಾಗಿರುವ ಅವರ ಮಗ ಮಾ| ಸ್ನೇಹಿತ್ ಕೂಡ ಇದರಲ್ಲಿರುವುದು ವಿಶೇಷ.
"ಇದೊಂದು ಗೆಳೆಯರ ನಡುವಿನ ಸ್ಟೋರಿ. ಇದಕ್ಕಾಗಿ ಸತತ ಒಂದು ವರ್ಷದಿಂದ ತಯಾರಿ ನಡೆಸಿದ್ದೇನೆ. ಈ ಚಿತ್ರಕ್ಕೆ 'ಮಹಾಭಾರತ' ಸ್ಪೂರ್ತಿ. ಕಥೆ ಹಾಗೂ ನಟರ ಮೇಲೆ ನನಗೆ ಎಲ್ಲಿಲ್ಲದ ಭರವಸೆ. ಅಗತ್ಯಗಳನ್ನು ಪೂರೈಸಲು ರೆಡಿ ಇರುವ ನಿರ್ಮಾಪಕರು ಬೆನ್ನಿಗಿದ್ದಾರೆ. ಇನ್ನೇನು ಬೇಕು? ಅಕ್ಟೋಬರ್ 20 ರಂದು ಮಹೂರ್ತ" ಎಂದಿದ್ದಾರೆ, ಈ ಚಿತ್ರದ ಮೂಲಕ 'ನಿರ್ದೇಶಕ'ರಾಗಲಿರುವ ರಾಮ್ ನಾರಾಯಣ್.