ಬಾಬು ಮೋಡಿಗೆ ಮಳೆಯ ಕೃಷ್ಣಪ್ಪನ ಜೋಡಿ

ಸದ್ಯಕ್ಕೆ ಗಾಂಧಿನಗರದ ವರ್ತಮಾನದ ಪ್ರಕಾರ ಸಣ್ಣ ಬಜೆಟ್ಟಿನ ಚಿತ್ರವೊಂದಕ್ಕೆ ಕೃಷ್ಣಪ್ಪ ಸ್ಕೆಚ್ ಹಾಕುತ್ತಿದ್ದಾರೆ. ಈ ಚಿತ್ರದ ನಿರ್ದೇಶಕ ದಿನೇಶ್ಬಾಬು. ನಾಯಕ ರಮೇಶ್. ಹತ್ತು ದಿನಗಳಲ್ಲಿ ಸಿನಿಮಾ ಮುಗಿಸಿಕೊಡುತ್ತೇನೆ ಎಂದು ಬಾಬು ಪ್ರಾಮಿಸ್ ಮಾಡಿದ್ದಾರಂತೆ (ಬಾಬು ಪ್ರತಿಭೆಗೆ ಹತ್ತು ದಿನ ಜಾಸ್ತಿಯಾಯಿತಲ್ಲವಾ ಎನ್ನುವುದು ಜನುಮದ ಗೆಳತಿ ನೋಡಿದವರ ಪ್ರಶ್ನೆ). ತಮ್ಮ ನಟನೆಯ ಚಿತ್ರಕ್ಕೆ ಒಳ್ಳೆಯ ಸ್ಯಾಟಲೈಟ್ ಡೀಲ್ ಕುದುರಿಸಿಕೊಡುತ್ತೇನೆ ಎಂದು ರಮೇಶ್ ಅಲ್ಲಲ್ಲಿ ಹೇಳಿಕೊಂಡಿರುವುದು ಕೂಡ ಕೃಷ್ಣಪ್ಪನವರಿಗೆ ಬಾಬು-ರಮೇಶ್ ಜೋಡಿಯ ಚಿತ್ರದ ಬಗ್ಗೆ ಆಸಕ್ತಿ ಮೂಡಿಸಿದೆ.
ಯೋಗರಾಜಭಟ್-ರಾಕ್ಲೈನ್ರ ಲಗೋರಿಯ ಪ್ರಸಂಗವೂ ಸೇರಿದಂತೆ ಪ್ರಸ್ತುತ ಬೀಸುತ್ತಿರುವ ಗಾಳಿ ದೊಡ್ಡ ಬಜೆಟ್ಟಿನ ಚಿತ್ರಗಳಿಗೆ ಅನುಕೂಲವಾಗಿ ಇದ್ದಂತಿಲ್ಲ. ಸಣ್ಣ ಬಜೆಟ್ಟಿನ ಚಿತ್ರಗಳತ್ತ ಒಲವು ತೋರಿಸುವ ನಿರ್ಮಾಪಕರು ಹೆಚ್ಚುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ದುಡ್ಡು ಬಾರದಿದ್ದರೂ ಪರವಾಗಿಲ್ಲ, ಇತರ ಮೂಲಗಳಿಂದ ಬಂಡವಾಳ ಗಿಟ್ಟಿದರೆ ಸಾಕು ಎಂದು ಯೋಚಿಸುವವರೂ ಇದ್ದಾರೆ. ಇವರ ಸಾಲಿಗೆ ಕೃಷ್ಣಪ್ಪ ಹೊಸ ಸೇರ್ಪಡೆ ಅಷ್ಟೇ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications