Don't Miss!
- News ಕಾಂಗ್ರೆಸ್ ಜನರಿಗೆ ಹೋಲ್ಸೆಲ್ ಮೋಸ ಮಾಡುತ್ತಿದೆ: ಮಾಜಿ ಸಿಎಂ
- Sports ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ನಲ್ಲಿ ವಿರಾಟ್ ಕೊಹ್ಲಿಯ 50ನೇ ಏಕದಿನ ಶತಕ!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಲ್ಪನಾ 'ಉಪ್ಪಿ'ಗೆ ಜತೆ ಬೆಳಗಾವಿ ಬೆಡಗಿ ಲಕ್ಷ್ಮೀ ರೈ
ತಮಿಳು, ತೆಲುಗಿನಲ್ಲಿ ಸೂಪರ್ ಹಿಟ್ ಆದ ಚಿತ್ರ ಕಾಂಚನಾ, ಕನ್ನಡಕ್ಕೆ 'ಕಲ್ಪನಾ' ಆಗಿ ಬರುತ್ತಿದೆ. ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ನಾಯಕ, ಡೈಲಾಗ್ ಕಿಂಗ್ ಸಾಯಿಕುಮಾರ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೆಲ್ಲಾ ಜಗಜ್ಜಾಹೀರಾಗಿ ಸಾಕಷ್ಟು ಕಾಲವಾಯ್ತು. ಹೊಸ ಸುದ್ದಿ, ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಬೆಳಗಾವಿ ಬೆಡಗಿ ಲಕ್ಷ್ಮೀ ರೈ.
ಇನ್ನೊಂದು ವಿಶೇಷವೆಂದರೆ ಮೂಲ ಚಿತ್ರ ಕಾಂಚನಾದಲ್ಲಿ ಅಭಿನಯಿಸಿದ್ದ ಮಂಗಳಮುಖಿ ಪ್ರಿಯಾ, ಕನ್ನಡದ ಕಲ್ಪನಾದಲ್ಲೂ ಇದ್ದಾರೆ. ಖ್ಯಾತ ಸಾಹಿತಿ ರಾಮ್ ನಾರಾಯಣ್ ಈ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರು. ಶ್ರುತಿ, ಉಮಾಶ್ರೀ, ಸಾಧು ಕೋಕಿಲ, ಶೋಭರಾಜ್ ಮುಂತಾದವರು ಈ ಚಿತ್ರದಲ್ಲಿರುವ ಉಳಿದ ಪ್ರಮುಖರು.
ಇದೇ ಡಿಸೆಂಬರ್ 14 ರಂದು ಮುಹೂರ್ತ. ದೀಪ ಬೆಳಗಿಸುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಲಿರುವ ರಾಘವ ಲಾರೆನ್ಸ್ ಪ್ರಮುಖ ಆಕರ್ಷಣೆ. ಬಾಲಿವುಡ್ ನಲ್ಲಿ ಈ ಚಿತ್ರವನ್ನು 'ಶಾರುಖ್ ಖಾನ್' ನಾಯಕತ್ವದಲ್ಲಿ ಇದೇ ರಾಘವ ಲಾರೆನ್ಸ್ ನಿರ್ದೇಶಿಸಲಿದ್ದಾರೆ. ಅವರ ಕಣ್ಣೇನಾದರೂ ಕನ್ನಡದ ಬೆಡಗಿ ಲಕ್ಷ್ಮೀ ರೈ ಮೇಲೆ ಬಿದ್ದರೆ ಈಕೆ ಹಿಂದಿಗೂ ನಾಯಕಿ ಆದರೆ ಅಚ್ಚರಿಯೇನಿಲ್ಲ. (ಒನ್ ಇಂಡಿಯಾ ಕನ್ನಡ)