twitter
    For Quick Alerts
    ALLOW NOTIFICATIONS  
    For Daily Alerts

    ದ್ವಾರಕೀಶ್ 'ವಿಷ್ಣುವರ್ಧನ' ಇಂದು ಬರಲಿಲ್ಲ ಯಾಕೆ?

    |

    Dwarakish
    ಆಶ್ಚರ್ಯವೋ ಆಶ್ಚರ್ಯ! ಈ ವಾರ (11-11-11) ಕ್ಕೆ ಯಾವ ಕನ್ನಡ ಸಿನಿಮಾವೂ ಬಿಡುಗಡೆಯಾಗಿಲ್ಲ. ಈ 11-11-11 ರಂದು "ವಿಷ್ಣುವರ್ಧನ" ಬಿಡುಗಡೆ ಮಾಡುವುದಾಗಿ ಹೇಳಿದ್ದರು ನಟ, ನಿರ್ಮಾಪಕ ದ್ವಾರಕೀಶ್. ಆದ್ರೆ ಅದೇನಾಯ್ತೋ, ದ್ವಾರ್ಕಿಯ ವಿಷ್ಣುವರ್ಧನ ಬರಲೇ ಇಲ್ಲ. ಕೆಲವು ದಿನಗಳ ಹಿಂದೆ ಈ ದಿನದಂದು ಚಿತ್ರ ಬಿಡುಗಡೆಗೆ ಕಾದಿದ್ದವರೆಲ್ಲಾ ಯಾಕೋ ಹಿಂದೆ ಸರಿದಿದ್ದಾರೆ.

    ಯಾಕೆ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಸಿಗುತ್ತಿಲ್ಲ. ಕಾರಣ ಮುಂದಿನ ವಾರಕ್ಕೆ ಸಿಕ್ಕರೂ ಸಿಗಬಹುದಷ್ಟೇ. ಹಿರಿಯ ನಿರ್ಮಾಪಕ ಶೈಲೇಂದ್ರ ಬಾಬು ನಿರ್ಮಾಣ, ಅವರ ಮಗ 'ಸುಮಂತ್' ಸ್ಯಾಂಡಲ್ ವುಡ್ ಎಂಟ್ರಿಯ ಚಿತ್ರ "ಆಟ" ಬಿಡುಗಡೆ ಕೂಡ ಮುಂದಕ್ಕೆ ಹೋಯ್ತು. ಸಾಗರ್ ಥಿಯೇಟರಿನಲ್ಲಿ ಹಚ್ಚಿದ್ದ ಪೋಸ್ಟರ್ ಅಲ್ಲೇ ಆಟ ಆಡುತ್ತಿದೆ.

    ಶಶಾಂಕ ನಿರ್ದೇಶನ, ವಿಜಯ್ ಅಭಿನಯದ ಚಿತ್ರ 'ಜರಾಸಂಧ' ಈ ವಾರ ಬಿಡುಗಡೆ ಆಗಬೇಕಿತ್ತು. ಅದೂ ಪೈಪೋಟಿಯ ಭಯದಿಂದ ಹಿಂದೆ ಸರಿಯಿತು. ಬಿಡುಗಡೆ ಆಗಬೇಕಾಗಿದ್ದ ಚಿತ್ರ ಬಿಡುಗಡೆ ಆಗಿಲ್ಲ. ಹೊಸಬರ ಚಿತ್ರ ಬರಲೇ ಇಲ್ಲ. ಹಾಗಾಗಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹೊಸ ಸಿನಿಮಾ ಇಲ್ಲದ ವಾರ, ಈ ಶುಕ್ರವಾರ. ಕೊನೆಗೆ ಉಳಿಯುವ ಪ್ರಶ್ನೆ, ಹೀಗೂ ಉಂಟೇ!

    English summary
    Today (11-11-11) no kannada movie released. Dwarakish pruduction Vishnuvardhana and Shailendra produced Aata was in Race. But they are not released today. 
 
 
    Friday, November 11, 2011, 11:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X