Don't Miss!
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೀತಪ್ರಿಯರ ಬೆಳ್ಳಿಹೆಜ್ಜೆ ಗುರುತು ಹಿಡಿದು
ಕರ್ನಾಟಕ ಚಲನಚಿತ್ರ ಅಕಾಡೆಮಿ ನಗರದಲ್ಲಿ ಶನಿವಾರ ಆಯೋಜಿಸಿದ್ದ 'ಬೆಳ್ಳಿ ಹೆಜ್ಜೆ-ದಿವ್ಯ ಚೇತನಗಳೊಡನೆ ಮುಖಾಮುಖಿ' ಮಾಲಿಕೆಯಲ್ಲಿ ಜನಪ್ರಿಯ ಗೀತ ರಚನೆಕಾರ ಗೀತಪ್ರಿಯ ತಮ್ಮ ಸಿನಿಮಾ ಬದುಕನ್ನು ಹಂಚಿಕೊಂಡಿದ್ದು ಹೀಗೆ.
'ಚಿಕ್ಕವನಿರುವಾಗ ಕವಿತೆ ಬರೆಯುತ್ತಿದ್ದೆ. ಅಪ್ಪ ಕುದುರೆ ಸವಾರರಾಗಿದ್ದರು. ನನ್ನಸಾಹಿತ್ಯಾಸಕ್ತಿ ನೋಡಿದ ಅಪ್ಪ, ಬೆಳ್ಳಾವೆ ನರಹರಿ ಶಾಸ್ತ್ರಿಗಳ ಬಳಿ ಕರೆದೊಯ್ದು ,ಇವರು ನಿನಗೆ ಗುರುಗಳು ಅಂದರು. ವೈ.ವಿ. ರಾವ್ ಹಾಗೂ ವಿಜಯಭಾಸ್ಕರ್ ನನ್ನನ್ನು ಬೆಳೆಸಿದ ಗುರುಗಳು. ಹೋಟೆಲ್ ಕೆಲಸದಲ್ಲಿ 35 ರೂ. ಸಂಬಳ ಬರುತ್ತಿತ್ತು. 40 ರೂ. ಕೊಡುತ್ತೇನೆ; ನನ್ನ ಜತೆಗೇ ಇದ್ದುಬಿಡು ಎಂದು ವಿಜಯಭಾಸ್ಕರ್ ಹೇಳಿದರು.
ಅವರೊಂದಿಗೆ ಮದ್ರಾಸ್ಗೆ ಹೋಗಿ, ಚಿತ್ರರಂಗದಲ್ಲಿ ಸಕ್ರಿಯನಾದೆ. ಅನೇಕ ಅವಕಾಶಗಳು ಬಂದವು. ಆರಂಭದಲ್ಲಿ ಹಾಡು ಬರೆದು ನಂತರ ನಟ, ನಿರ್ದೇಶಕನಾಗಿ ಅನೇಕ ಚಿತ್ರ ಮಾಡಿ ಯಶಸ್ಸು ಕಂಡೆ'. 'ನಿರ್ದೇಶಿಸಿದ ಬಹಳಷ್ಟು ಚಿತ್ರಗಳು ಹಿಟ್ ಆದವು. ಆದರೆ, ಜನತೆ ನನ್ನನ್ನು ಗೀತರಚನೆಕಾರ ಎಂದು ಗುರುತಿಸುತ್ತಾರೆಯೇ ಹೊರತು ನಿರ್ದೇಶಕ ಎಂದಲ್ಲ. ಜೀವನದಲ್ಲಿ ಬಹಳ ಕಷ್ಟ ಅನುಭವಿಸಿದವನು.
ಈ ಅನುಭವದ ಹಿನ್ನೆಲೆಯಲ್ಲಿ ಅಂಥ ಹಾಡುಗಳನ್ನು ಬರೆದೆ. ಸಂಕಲನದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೆ ಉತ್ತಮ ನಿರ್ದೇಶಕನಾಗಲು ಸಾಧ್ಯವಿಲ್ಲ. ಕಾದಂಬರಿಗಳನ್ನು ಸಿನಿಮಾ ಮಾಡುವುದು ಕೂಡಾ ಸವಾಲಿನ ಕೆಲಸ. ಸಿನಿಮಾದಲ್ಲಿ ಎಲ್ಲರೂ ಸಹಕಾರ ನೀಡುತ್ತಿದ್ದರು. ಹೀಗಾಗಿ, ಈ ಹಂತಕ್ಕೆ ಬೆಳೆದೆ' ಎಂದು ವಿವರಿಸಿದರು. ಅಕಾಡೆಮಿ ಅಧ್ಯಕ್ಷ ಟಿ.ಎಸ್. ನಾಗಾಭರಣ ಉಪಸ್ಥಿತರಿದ್ದರು.