Just In
- 31 min ago
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
- 1 hr ago
ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ; ಬಿಸ್ವಜಿತ್ ಗೆ ಭಾರತದ ವರ್ಷದ ವ್ಯಕ್ತಿ ಪ್ರಶಸ್ತಿ
- 2 hrs ago
ಡಿ ಬಾಸ್ ದರ್ಶನ್ ಜೊತೆ ಬಾಲಿವುಡ್ ನಟಿ ಕಂಗನಾ ರಣಾವತ್: ಫೋಟೋ ವೈರಲ್
- 4 hrs ago
ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಯಶ್, ಸುದೀಪ್ ಸುಮಲತಾ; ಫೋಟೋ ವೈರಲ್
Don't Miss!
- News
ಬಾಗಲಕೋಟೆಗೆ ಅಮಿತ್ ಶಾ ಭೇಟಿ, ಹಲವು ಯೋಜನೆಗಳಿಗೆ ಚಾಲನೆ
- Finance
Home Loan: ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ 15 ಬ್ಯಾಂಕ್ ಗಳು
- Sports
ಭಾರತ vs ಆಸ್ಟ್ರೇಲಿಯಾ: ಶಾರ್ದೂಲ್- ಸುಂದರ್ ಆಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಕೊಹ್ಲಿ
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಳ್ಳಮಂಜ ಕೋಮಲ್ ಈಗ ಮರ್ಯಾದೆ ರಾಮಣ್ಣ
'ಕಳ್ ಮಂಜ' ಕೋಮಲ್ ಈಗ 'ಮರ್ಯಾದೆ ರಾಮಣ್ಣ'ನಾಗಲು ಹೊರಟಿದ್ದಾರೆ. ಅಂದರೆ ಮುಂದಿನ ಚಿತ್ರಕ್ಕೆ 'ಮರ್ಯಾದೆ ರಾಮಣ್ಣ' ಎಂದು ಹೆಸರಿಡಲಾಗಿದೆ. ಅಂದಹಾಗೆ ಇದು ತೆಲುಗಿನಲ್ಲಿ ಭರ್ಜರಿ ಯಶಸ್ಸು ದಾಖಲಿಸಿದ 'ಮರ್ಯಾದಾ ರಾಮನ್ನ' ಚಿತ್ರದ ರೀಮೇಕ್.
ಮತ್ತೆ ರೀಮೇಕಾ ಎಂದು ಮೂಗು ಮುರಿಯಬೇಡಿ. ಇದು ರೀಮೇಕ್ ಚಿತ್ರವಾದರೂ ಕಥೆ ಒಂಥರಾ ಭಿನ್ನವಾಗಿದೆ. ತೆಲುಗಿನಲ್ಲಿ ಹಾಸ್ಯನಟ ಸುನಿಲ್ ಮತ್ತು ಸಲೋನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಈ ಚಿತ್ರವನ್ನು 'ಮಗಧೀರ' ಖ್ಯಾತಿಯ ರಾಜಮೌಳಿ ನಿರ್ದೇಶಿಸಿದ್ದರು. ಈಗ ಇದೇ ಚಿತ್ರವನ್ನು ನಿರ್ದೇಶಕ ಗುರುಪ್ರಸಾದ್ ಕನ್ನಡ ತರುತ್ತಿದ್ದಾರೆ.
ಗುರುಪ್ರಸಾದ್ ಎಂದರೆ 'ಮಠ' ಖ್ಯಾತಿಯ ನಿರ್ದೇಶಕರಲ್ಲ ಎಂಬುದು ನಿಮ್ಮ ಗಮನಕ್ಕಿರಲಿರಲಿ. ಇವರು 'ಕುಸುಮ' ಖ್ಯಾತಿಯ ಗುರುಪ್ರಸಾದ್. ಕುಮಾರೇಶ್ ಬಾಬು ಎಂಬುವವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ 'ಕಳ್ ಮಂಜ' ಚಿತ್ರದಲ್ಲಿ ಬಿಜಿಯಾಗಿರುವ ಕೋಮಲ್ ಅದು ಮುಗಿದ ಕೂಡಲೆ ಮರ್ಯಾದಾ ಪುರುಷರಾಗಲಿದ್ದಾರೆ!
ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯಲಿದೆ. ಚಿತ್ರದ ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯಬೇಕಾಗಿದೆ. ಮೂಲ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಕೀರವಾಣಿ ಅವರನ್ನೇ ಕರೆಸಲು ಚಿಂತನೆ ನಡೆದಿದೆ. ಪೂರ್ಣ ಪ್ರಮಾಣದ ನಾಯಕನಾಗಿ ಕೋಮಲ್ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ.