Don't Miss!
- News ಷೇರು ಮಾರುಕಟ್ಟೆಯಲ್ಲಿ ಮಹಾ ಕುಸಿತ & ಏರಿಕೆ!
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಳ್ಳಮಂಜ ಕೋಮಲ್ ಈಗ ಮರ್ಯಾದೆ ರಾಮಣ್ಣ
'ಕಳ್ ಮಂಜ' ಕೋಮಲ್ ಈಗ 'ಮರ್ಯಾದೆ ರಾಮಣ್ಣ'ನಾಗಲು ಹೊರಟಿದ್ದಾರೆ. ಅಂದರೆ ಮುಂದಿನ ಚಿತ್ರಕ್ಕೆ 'ಮರ್ಯಾದೆ ರಾಮಣ್ಣ' ಎಂದು ಹೆಸರಿಡಲಾಗಿದೆ. ಅಂದಹಾಗೆ ಇದು ತೆಲುಗಿನಲ್ಲಿ ಭರ್ಜರಿ ಯಶಸ್ಸು ದಾಖಲಿಸಿದ 'ಮರ್ಯಾದಾ ರಾಮನ್ನ' ಚಿತ್ರದ ರೀಮೇಕ್.
ಮತ್ತೆ ರೀಮೇಕಾ ಎಂದು ಮೂಗು ಮುರಿಯಬೇಡಿ. ಇದು ರೀಮೇಕ್ ಚಿತ್ರವಾದರೂ ಕಥೆ ಒಂಥರಾ ಭಿನ್ನವಾಗಿದೆ. ತೆಲುಗಿನಲ್ಲಿ ಹಾಸ್ಯನಟ ಸುನಿಲ್ ಮತ್ತು ಸಲೋನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಈ ಚಿತ್ರವನ್ನು 'ಮಗಧೀರ' ಖ್ಯಾತಿಯ ರಾಜಮೌಳಿ ನಿರ್ದೇಶಿಸಿದ್ದರು. ಈಗ ಇದೇ ಚಿತ್ರವನ್ನು ನಿರ್ದೇಶಕ ಗುರುಪ್ರಸಾದ್ ಕನ್ನಡ ತರುತ್ತಿದ್ದಾರೆ.
ಗುರುಪ್ರಸಾದ್ ಎಂದರೆ 'ಮಠ' ಖ್ಯಾತಿಯ ನಿರ್ದೇಶಕರಲ್ಲ ಎಂಬುದು ನಿಮ್ಮ ಗಮನಕ್ಕಿರಲಿರಲಿ. ಇವರು 'ಕುಸುಮ' ಖ್ಯಾತಿಯ ಗುರುಪ್ರಸಾದ್. ಕುಮಾರೇಶ್ ಬಾಬು ಎಂಬುವವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ 'ಕಳ್ ಮಂಜ' ಚಿತ್ರದಲ್ಲಿ ಬಿಜಿಯಾಗಿರುವ ಕೋಮಲ್ ಅದು ಮುಗಿದ ಕೂಡಲೆ ಮರ್ಯಾದಾ ಪುರುಷರಾಗಲಿದ್ದಾರೆ!
ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯಲಿದೆ. ಚಿತ್ರದ ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯಬೇಕಾಗಿದೆ. ಮೂಲ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಕೀರವಾಣಿ ಅವರನ್ನೇ ಕರೆಸಲು ಚಿಂತನೆ ನಡೆದಿದೆ. ಪೂರ್ಣ ಪ್ರಮಾಣದ ನಾಯಕನಾಗಿ ಕೋಮಲ್ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ.