Don't Miss!
- News Rain: ಬರದಿಂದ ತತ್ತರಿಸಿದ ಮಲೆನಾಡು: ಕೊಪ್ಪ ಮೇರುತಿ ಶಿಖರದಲ್ಲಿ ವರುಣನಿಗೆ ಹೋಮ-ಹವನ
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪರಭಾಷೆ ಚಿತ್ರಗಳ ವಿರುದ್ಧ ಸಿದ್ಲಿಂಗು, ಕೋ ಕೋ ಗುಡುಗು
ಪರಭಾಷೆ ಚಿತ್ರಗಳಿಗೆ ಹೆಚ್ಚಿನ ಥಿಯೇಟರ್ ನೀಡುತ್ತಿರುವ ಕನ್ನಡ ಚಿತ್ರೋದ್ಯಮದ ವಿತರಕರ ವಿರುದ್ಧ ಸಿದ್ಲಿಂಗು ಮತ್ತು ಕೋ ಕೋ ಚಿತ್ರತಂಡಗಳು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದವು. ಕನ್ನಡ ನೆಲದಲ್ಲಿ ಪರಭಾಷೆ ಚಿತ್ರಗಳಿಗೆ ಮಣೆ ಹಾಕುವ ಸಂಪ್ರದಾಯ ಹೊಸದೇನೂ ಅಲ್ಲ. ಆದರೆ ಇದೀಗ ಎಚ್ಚೆತ್ತುಕೊಂಡಿರುವ ಕನ್ನಡ ಚಿತ್ರ ನಿರ್ಮಾಪಕರು ಸುದ್ದಿಗೋಷ್ಠಿ ನಡೆಸಿ ಸುದ್ದಿಯಾಗುತ್ತಿದ್ದಾರೆ.
ನಾಳೆ, ಜನವರಿ 12ರಂದು ತಮಿಳಿನ 'ನಂಬನ್' ಚಿತ್ರ ಕರ್ನಾಟಕದ ಬಹಳಷ್ಟು ಥಿಯೇಟರುಗಳಲ್ಲಿ ಬಿಡುಗಡೆ ಆಗುತ್ತಿದೆ. ಜೊತೆಗೆ ಶುಕ್ರವಾರ ತೆಲುಗಿನ 'ಬಿಸಿನೆಸ್ ಮನ್' ಕೂಡ ಬಿಡುಗಡೆ ಆಗಲಿದೆ. ಅದೇ ದಿನ ಬಿಡುಗಡೆ ಘೋಷಿಸಿರುವ ಕನ್ನಡದ 2 ಚಿತ್ರಗಳಾದ ಸಿದ್ಲಿಂಗು ಮತ್ತು ಕೋ ಕೋ, ಸಾಕಷ್ಟು ನಿರೀಕ್ಷೆಗಳ ನಡುವೆಯೂ ಥಿಯೇಟರ್ ಸಮಸ್ಯೆಯಿಂದ ನಡುಗುತ್ತಿದ್ದಾರೆ.
ಕಾರಣ, ಪರಭಾಷಾ ಚಿತ್ರಕ್ಕೆ ಕನ್ನಡಿಗರ ಪ್ರತಿಕ್ರಿಯೆ ಯಾವಾಗಲೂ ಚೆನ್ನಾಗಿಯೇ ಇರುತ್ತೆ ಎನ್ನುವುದು ಒಂದು, ಜೊತೆಗೆ ಸೀಮಿತ ಮಾರುಕಟ್ಟೆಯನ್ನು ಅವಲಂಬಿಸಿರರುವ ಕನ್ನಡ ಚಿತ್ರಗಳು ಆ ಮಟ್ಟಿಗೆ ಶ್ರೀಮಂತವಾಗಿಲ್ಲದೇ ಇರುವುದು ಇನ್ನೊಂದು. ಈಗ, ಈ ಎರಡೂ ಚಿತ್ರತಂಡಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬಹಳಷ್ಟು ನಿರ್ಮಾಪಕರನ್ನು ಒಟ್ಟಾಗಿಸಿದೆ.
ಇಂದು, ನಿರ್ಮಾಪಕರ ಸಂಘ ಹಾಗೂ ಸಿದ್ಲಿಂಗು ಮತ್ತು ಕೋ ಕೋ ತಂಡಗಳ ಮುಂದಾಳತ್ವದಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದೆ. ಇದಕ್ಕೊಂದು ಪರಿಹಾರ ಹುಡುಕುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಚಿತ್ರತಂಡ ಚಲನಚಿತ್ರ ವಾಣಿಜ್ಯಮಂಡಳಿಯ ಮೊರೆಹೋಗಿದೆ. ಸಿದ್ಲಿಂಗು ಮತ್ತು ಕೋ ಕೋಗೆ ನಾಡಿದ್ದು ಬಿಡುಗಡೆ ಒಂದುಕಡೆ, ಥಿಯೇಟರ್ ಸಮಸ್ಯೆ ಇನ್ನೊಂದು ಕಡೆ.
ಹೀಗೆ ಎರಡು ಒತ್ತಡಗಳ ನಡುವೆ ಕನ್ನಡ ಚಿತ್ರಗಳು ನಲುಗಬೇಕಾದ ಪರಿಸ್ಥಿತಿಗೆ ಕಾರಣವಾಗಿರುವವರು ಕೂಡ ಚಿತ್ರೋದ್ಯಮದ ಒಂದು ಅನಿವಾರ್ಯ ಅಂಗವಾಗಿರುವ 'ವಿತರಕರು' ಎಂಬುದೇ ದೊಡ್ಡ ವಿಪರ್ಯಾಸ. ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲಿ ಥಿಯೇಟರ್ ಸಮಸ್ಯೆ ಇನ್ನಾದರೂ ಒದಗದಿರಲಿ ಎಂಬುದು ಸಿನಿಪ್ರೇಕ್ಷಕರ ಹಾಗೂ ಚಿತ್ರೋದ್ಯಮದ ಒಕ್ಕೊರಲ ಕೂಗು. (ಒನ್ ಇಂಡಿಯಾ ಕನ್ನಡ)