ಸೂಪರ್ ನಂತರ ಕ್ರಿಯೆಟಿವ್ ಉಪೇಂದ್ರ ಮಾಯ!
ಬಿಡುಗಡೆಗೆ ರೆಡಿಯಾಗಿರುವ 'ಆರಕ್ಷಕ' ಮತ್ತು 'ಕಠಾರಿ ವೀರ ಸುರ ಸುಂದರಾಂಗಿ' ಹೊರತುಪಡಿಸಿದರೆ ಉಪ್ಪಿ ನಟಿಸುತ್ತಿರುವ ಎಲ್ಲಾ ಚಿತ್ರಗಳು ರಿಮೇಕ್. ಜಯಮಾಲಾ ಪುತ್ರಿ ಸೌಂದರ್ಯಾ ನಾಯಕಿಯಾಗಿರುವ 'ಗಾಡ್ಫಾದರ್', ಲಕ್ಷ್ಮಿ ರೈ ನಾಯಕಿಯಾಗಿರುವ 'ಕಲ್ಪನಾ' ಸೇರಿದಂತೆ ಹಲವು ರೀಮೇಕ್ ಚಿತ್ರಗಳು ಉಪ್ಪಿ ಕೈಯಲ್ಲಿವೆ.
ಸದ್ಯಕ್ಕೆ ನಿರ್ಮಾಪಕ ಅಣಜಿ ನಾಗರಾಜ್ 'ಪರಮಶಿವ' ಮತ್ತು 'ಭೀಮಾ ತೀರದಲ್ಲಿ' ಚಿತ್ರಗಳಲ್ಲಿ ಮುಳುಗಿ ಹೋಗಿದ್ದಾರೆ. ಅತ್ತ ಉಪ್ಪಿ ಕೂಡ ತಾನು ಒಪ್ಪಿಕೊಂಡಿರುವ ಚಿತ್ರಗಳಲ್ಲಿ ಬ್ಯುಸಿ. ಹಾಗಾಗಿ ಉಪ್ಪಿಯ ಹೊಸ ರಿಮೇಕ್ ಚಿತ್ರ 'ಚಿಂತಾಕಾಯಲ ರವಿ' ಸದ್ಯಕ್ಕೆ ಸೆಟ್ಟೇರುವ ಸೂಚನೆಯಿಲ್ಲ, ಬಹುಶಃ ಮೇ ತಿಂಗಳ ನಂತರ ಪ್ರಾರಂಭ.
ಯಾಕೆ ಕನ್ನಡದ ರಿಯಲ್ ಸ್ಟಾರ್ ಉಪ್ಪಿ, ರೀಮೇಕ್ ಚಿತ್ರಗಳ ಮೊರೆ ಹೋಗಿದ್ದಾರೆ ಎಂಬುದು ಅಭಿಮಾನಿಗಳ ಕೂಗು. ಬರೋಬ್ಬರಿ ಹತ್ತು ವರ್ಷಗಳ ನಂತರ ನಿರ್ದೇಶನಕ್ಕೆ ಅಭಿಮಾನಿಗಳ ಕರೆಗೆ ಓಗೊಟ್ಟು ಮತ್ತೆ ನಿರ್ದೆಶನಕ್ಕೆ ಮರಳಿದ್ದ ಉಪೇಂದ್ರ, ಸೂಪರ್ ಚಿತ್ರದ ಮೂಲಕ ಕನ್ನಡದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದರು. ಆದರೆ ನಂತರ ರೀಮೇಕ್ ಸರದಾರ ಆಗಿದ್ದು ಯಾಕೆ? ಉತ್ತರಕ್ಕೆ ಉಪೇಂದ್ರರನ್ನೇ ಕಾಯಬೇಕು. (ಒನ್ ಇಂಡಿಯಾ ಕನ್ನಡ)


Click it and Unblock the Notifications











