Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಗವಲ್ಲಿ ಖ್ಯಾತಿಯ ಸೌಂದರ್ಯ ಹೆಸರಲ್ಲಿ ಮಂದಿರ
ವಿಮಾನ ಅಪಘಾತದಲ್ಲಿ ದುರಂತ ಸಾವಪ್ಪಿದ ಬಹುಭಾಷಾ ತಾರೆ ಸೌಂದರ್ಯ ಚಿತ್ರರಸಿಕರನ್ನು ಅಗಲಿ ಎಂಟು ವರ್ಷಗಳೇ ಕಳೆದು ಹೋಗಿವೆ. ಆದರೆ ಅಭಿಮಾನಿಗಳ ಹೃದಯದಲ್ಲಿ ಆಕೆ ಇನ್ನೂ ಜೀವಂತವಾಗಿದ್ದಾರೆ. ಆಕೆಗೆ ಹೃದಯದಲ್ಲೇ ಮಂದಿರ ಕಟ್ಟಿ ಆರಾಧಿಸುವವರಿಗೂ ಕೊರತೆಯಿಲ್ಲ.
ಸಿನಿಮಾ ತಾರೆಗಳಿಗೆ ಗುಡಿ ಗೋಪುರಗಳನ್ನು ಕಟ್ಟಿಸುವ ಅಭಿಮಾನಿ ದೇವರುಗಳು ಸಾಕಷ್ಟು ಮಂದಿ ಇದ್ದಾರೆ. ಕ್ಷೀರಾಭಿಷೇಕ, ಹೂವಿನ ಅಭಿಷೇಕ ಮಾಡಿ ತಮ್ಮ ಅಭಿಮಾನ ಮೆರೆಯುವುದು ಸಾಮಾನ್ಯ.ಈಗಾಗಲೆ ಹಲವು ತಾರೆಗಳಿಗೆ ಮಂದಿರಗಳನ್ನು ಕಟ್ಟಿಸಿ ತಮ್ಮ ಅಭಿಮಾನವನ್ನು ಮೆರೆದ ಅಭಿಮಾನಿಗಳು ಈಗ ಸೌಂದರ್ಯ ಹೆಸರಿನಲ್ಲೂ ಮಂದಿರ ಕಟ್ಟಿಸಲು ಮುಂದಾಗಿದ್ದಾರೆ.
2೦೦4ರಲ್ಲಿ ನಟಿ ಸೌಂದರ್ಯ ವಿಮಾನ ಅಪಘಾತದಲ್ಲಿ ದುರಂತ ಸಾವಪ್ಪಿದ್ದರು. 2012ರ ಏಪ್ರಿಲ್ಗೆ ಸೌಂದರ್ಯ ಚಿತ್ರರಸಿಕರನ್ನು ಅಗಲಿ ಎಂಟು ವರ್ಷಗಳಾಗುತ್ತವೆ. ಈ ನೆಪದಲ್ಲಿ ಆಕೆಯ ಕೆಲವು ಅಭಿಮಾನಿಗಳು 'ಸೌಂದರ್ಯ ಮಂದಿರ' ಕಟ್ಟಿಸಲು ಕೈಹಾಕಿದ್ದಾರೆ.
ಬೆಂಗಳೂರಿನ ವಿಭೂಪಿಪುರ ಬಳಿ 'ಸೌಂದರ್ಯ ಮಂದಿರ' ನಿರ್ಮಾಣವಾಗಲಿದೆ. ಆದರೆ ಈ ಮಂದಿರದಲ್ಲಿ ಮಂಗಳಾರತಿ, ಪ್ರಸಾದ ಮತ್ತು ತೀರ್ಥ ವಿನಿಯೋಗ ಇರುವುದಿಲ್ಲ. ಇದಕ್ಕೆ ಬದಲಾಗಿ ಇಲ್ಲಿ ಆಕೆಯ ಭಾವ ಚಿತ್ರಗಳು, ವಿಗ್ರಹಗಳು ಇರುತ್ತವೆ. ಇದನ್ನು ಇನ್ನೊಂದು ರೀತಿ ಸ್ಮಾರಕ ಎಂದು ಕರೆಯಬಹುದು. (ಒನ್ಇಂಡಿಯಾ ಕನ್ನಡ)