twitter
    For Quick Alerts
    ALLOW NOTIFICATIONS  
    For Daily Alerts

    ಮೂವರು ನಿರ್ದೇಶಕರಿಗೆ ಅರ್ಧಚಂದ್ರ!

    By Super
    |

    Kodlu Ramakrishna
    ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ ನಡೆಸುತ್ತಿರುವ ನಿರ್ದೇಶನಾ ತರಬೇತಿ ಶಿಬಿರದಂತೆ, ಪರ್ಯಾಯ ತರಬೇತಿ ಶಾಲೆಯನ್ನು ತೆರೆದ ಹಿನ್ನೆಲೆಯಲ್ಲಿ ನಿರ್ದೇಶಕರ ಸಂಘದಿಂದ ಮೂವರನ್ನು ಉಚ್ಛಾಟಿಸಲಾಗಿದೆ. ಸಂಘದ ಉಪಾಧ್ಯಕ್ಷ ಕೋಡ್ಲು ರಾಮಕೃಷ್ಣ, ಪದಾಧಿಕಾರಿಗಳಾದ ಆನಂದ್‌ ಪಿ. ರಾಜು ಮತ್ತು ಬಿ. ರಾಮಮೂರ್ತಿ ಅವರನ್ನು ಸಂಘದಿಂದ ತೆಗೆದು ಹಾಕಲಾಗಿದೆ.

    ನಿರ್ದೇಶಕರ ಸಂಘವು ಫಿಲಂ ಇನ್‌ಸ್ಟಿಟ್ಯೂಟ್‌ ಮಾದರಿಯ ತರಬೇತಿ ಶಿಬಿರಗಳನ್ನು ಕಳೆದ ಎರಡು ವರ್ಷಗಳಿಂದ ನಡೆಸುತ್ತಿದೆ. ಈಗಾಗಲೇ 5 ತಂಡಗಳು ತರಬೇತಿಯನ್ನು ಹೊಂದಿದ್ದು ಈ ಶಿಬಿರದಲ್ಲಿ ಉತ್ತೀರ್ಣರಾದ 80 ವಿದ್ಯಾರ್ಥಿ ಗಳು ಸಹಾಯಕ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ. ಸಂಘದ ಕಣ್ಣು ತಪ್ಪಿಸಿ ಉಚ್ಛಾಟಿತ ಮೂರೂ ನಿರ್ದೇಶಕರುಗಳು ತಮ್ಮದೇ ತರಬೇತು ಶಾಲೆಯನ್ನು ನಡೆಸುತ್ತಿದ್ದರು. ಇನ್ನಿತರ ತರಬೇತಿ ಶಾಲೆಗಳು ಸರಿಯಿಲ್ಲ ಎಂಬ ಆರೋಪವನ್ನೂ ಹೊರಿಸಿದ್ದರು.

    ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದಾಗ ಮೂವರಿಂದಲೂ ಸ್ಪಷ್ಟ ಉತ್ತರ ಬರಲಿಲ್ಲ. ರಾಜೀನಾಮೆ ನೀಡಲು ಒತ್ತಾಯಿಸಿದರೂ ಅವರುಗಳು ಸರಿಯಾದ ಪ್ರತಿಕ್ರಿಯೆ ತೋರಿಸದ ಕಾರಣ ಕೋಡ್ಲು ರಾಮಕೃಷ್ಣ, ಆನಂದ್‌ ಪಿ. ರಾಜು ಮತ್ತು ರಾಮಮೂರ್ತಿಯವರನ್ನು ಉಚ್ಛಾಟನೆ ಮಾಡಲಾಗಿದೆ ಎಂದು ಚಲನಚಿತ್ರ ನಿರ್ದೇಶಕರ ಸಂಘದ ಪ್ರಕಟಣೆ ಹೇಳಿದೆ.

    ನಮ್ದೇನೂ ತಪ್ಪಿಲ್ಲ..
    ನಾವು ತರಬೇತಿ ಶಾಲೆಯನ್ನು ನಡೆಸುತ್ತಿರುವ ವಿಷಯವನ್ನು ಈಗಾಗಲೇ ಸಂಘದ ಗಮನಕ್ಕೆ ತಂದಿದ್ದೇವೆ. ಇದರಲ್ಲಿ ನಮ್ಮ ತಪ್ಪು ಏನೂ ಇಲ್ಲ ಎಂಬುದು ಉಚ್ಛಾಟಿತ ನಿರ್ದೇಶಕರುಗಳ ಅಭಿಪ್ರಾಯವಾಗಿದೆ. ಮತ್ತೊಮ್ಮೆ ಸಂಘದ ಕಾರ್ಯದರ್ಶಿಗಳ ಜೊತೆ ಸಮಾಲೋಚನೆ ನಡೆಸಿ ಒಂದು ನಿರ್ಧಾರಕ್ಕೆ ಬರಲಿದ್ದೇವೆ ಎಂದು ಕೋಡ್ಲು ರಾಮಕೃಷ್ಣ ತಿಳಿಸಿದ್ದಾರೆ.

    English summary
    Kodlu Ramakrishna, Anand P. Raju and B. Ramamurthy expelled from Karnataka film directors association
    Monday, July 22, 2013, 14:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X