ಅಣ್ಣಾವ್ರ ಸಿನಿಮಾ ವಿಚಾರಸಂಕಿರಣ
- ಸಿನಿಡೆಸ್ಕ್, ದಟ್ಸ್ ಕನ್ನಡ
ರಾಜ್ ವಿಚಾರ ಸಂಕಿರಣದ ಜೊತೆ ಚಲನಚಿತ್ರ ರಂಗಕ್ಕೆ ಸಂಬಂಧಪಟ್ಟ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲ ಕಾರ್ಯಕ್ರಮಗಳನ್ನು ಕನ್ನಡ ಜನಶಕ್ತಿಯ ಆಶ್ರಯದಲ್ಲಿ ನಡೆಸಲಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಂ.ಎಸ್. ತಿಮ್ಮಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಪಿಇಎಸ್ ಶಿಕ್ಷಣ ಸಂಸ್ಥೆಯ ಪ್ರೊ. ದೊರೆಸ್ವಾಮಿ ಅವರು ಆಗಮಿಸಲಿದ್ದಾರೆಂದು ಕನ್ನಡ ಜನ ಶಕ್ತಿ ಸಂಘದ ಅಧ್ಯಕ್ಷ ಸಿ.ಕೆ. ರಾಮೇಗೌಡ ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಪ್ರಮುಖವಾಗಿ- ಸಾಹಿತಿಗಳಾದ ಕೆ. ಎಸ್. ನಿಸಾರ್ ಅಹಮದ್, ಪ್ರೊ. ದೊಡ್ಡರಂಗೇಗೌಡ, ನಟ ಜಿ.ಕೆ. ಗೋವಿಂದರಾವ್, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಕೆ.ಎಸ್.ಎಲ್. ಸ್ವಾಮಿ ಮೊದಲಾದವರು ಭಾಗವಹಿಸಲಿದ್ದಾರೆ.
ಸಾ.ರಾ. ಗೋವಿಂದು ಅವರ ‘ತನು ಚಿತ್ರ ಸಂಸ್ಥೆಯು’ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಲಿದೆ. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸುವ ಕಾರ್ಯಕ್ರಮವನ್ನೂ ಇಟ್ಟುಕೊಳ್ಳಲಾಗಿದೆ. ಹಿರಿಯ ಕಲಾವಿದರಾದ ಶಾಂತಮ್ಮ, ಬಿ.ಜಯಾ, ಸದಾಶಿವ ಬ್ರಹ್ಮಾವರ್, ಶನಿಮಹಾದೇವಪ್ಪ ಮೊದಲಾದವರನ್ನು ಸನ್ಮಾನಿಸಲಾಗುತ್ತಿದೆ ಎಂದು ರಾಮೇಗೌಡ ಅವರು ತಿಳಿಸಿದ್ದಾರೆ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications