Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇನ್ನೊಬ್ಬ ಪೊಲೀಸ್ ಚಿತ್ರ-ದಯಾನಾಯಕ್
* ದಟ್ಸ್ಕನ್ನಡ ಬ್ಯರೋ
ತಮ್ಮ ಕೆಲಸದ ಖದರಿನಿಂದ ನಿಜ ಜೀವನದ ಹೀರೋಗಳಾಗುವ ಪೊಲೀಸರ ಸಾಹಸ ಗಾಥೆಯನ್ನು ಚಿತ್ರಗಳಾಗಿಸಿದ ಸಾಕಷ್ಟು ಉದಾಹರಣೆಗಳು ಕನ್ನಡ ಚಿತ್ರೋದ್ಯಮದಲ್ಲಿ ಸಿಗುತ್ತವೆ. ಸಾಂಗ್ಲಿಯಾನ ಬಗ್ಗೆ ಮೂರು, ಐಪಿಎಸ್ ಕೆಂಪಯ್ಯ ಕಥೆಯಾಧಾರಿಸಿದ ಒಂದು ಚಿತ್ರ ಬಂದು ದುಡ್ಡು ಮಾಡಿದವು. ಆದರೆ ಕಳೆದ ವರ್ಷ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಂ ವರಸೆಗಳನ್ನು ಆಧರಿಸಿ ತೆರೆಗೆ ಬಂದ ‘ಪೊಲೀಸ್ ಆಫೀಸರ್’ ಚಿತ್ರ ತೋಪಾಯಿತು.
ಈಗ ನಿರ್ಮಾಪಕ ಧನರಾಜ್ ಮಂಗಳೂರ್ ಕಣ್ಣು ಕರಾವಳಿ ಕನ್ನಡಿಗ, ಇನ್ಸ್ಪೆಕ್ಟರ್ ದಯಾನಂದ್ ನಾಯಕ್ ಮೇಲೆ ಬಿದ್ದಿದೆ. ಮುಂಬಯಿ ಪಾತಕ ಲೋಕದಲ್ಲಿ ನಡುಕ ಹುಟ್ಟಿಸಿದ ದಯಾನಂದ್, ದಯಾ ನಾಯಕ್ ಅಂತಲೇ ಹೆಸರುವಾಸಿ. ಎನ್ಕೌಂಟರ್ಗಳಲ್ಲಿ ಸುಮಾರು ನಲವತ್ತು ಚಿಲ್ಲರೆ ಭೂಗತ ಪಾತಕಿಗಳನ್ನು ಇಲ್ಲವಾಗಿಸಿರುವ ದಯಾ ನಾಯಕ್ ಈಗ ಚಿತ್ರವಾಗುತ್ತಿದ್ದಾರೆ.
ದಯಾ ನಾಯಕ್ ದಕ್ಷಿಣ ಕನ್ನಡದವರು. ಹಾಗಾಗಿ ಮಂಗಳೂರು ಧನರಾಜ್ಗೆ ಅವರ ಬಗ್ಗೆ ಮೊದಲಿಂದಲೂ ಹೆಮ್ಮೆ. ಇತ್ತೀಚೆಗೆ ನಿರ್ದೇಶಕ ಆನಂದ್ ಪಿ. ರಾಜ್ ಜೊತೆ ಚರ್ಚಿಸಿದ್ದರ ಫಲಶೃತಿ ಹೊಸ ಚಿತ್ರದ ನಿರ್ಮಾಣ.
ಚಿತ್ರದ ಹೆಸರು ‘ದಯಾ ನಾಯಕ್’. ನಾಯಕಿಗಾಗಿ ಹೊಸ ಮುಖದ ಹುಡುಕಾಟ ನಡೆದಿದೆ. ಅವಿನಾಶ್, ಧನರಾಜ್, ಸಾಧು ಕೋಕಿಲ, ಸುಮಿತ್ರ ಮೊದಲಾದವರು ತಾರಾ ಬಳಗದಲ್ಲಿದ್ದಾರೆ.
ತಮ್ಮ ಕಾರ್ಯವೈಖರಿಗೆ ಲಕ್ಷಾಂತರ ರುಪಾಯಿ ಬಹುಮಾನ ಪಡೆದಿರುವ ದಯಾ ನಾಯಕ್, ಬಂದ ಹಣವನ್ನೆಲ್ಲ ತಾವು ಹುಟ್ಟಿದ ಹಳ್ಳಿಯಲ್ಲಿ ಶಾಲೆ ಕಟ್ಟೋಕೆ ಬಳಸಿದ್ದಾರೆ. ಇವತ್ತಿಗೂ ಮುಂಬಯಿಯ ಸಿ.ಐ. ಘಟಕದಲ್ಲಿ ಇನ್ಸ್ಪೆಕ್ಟರ್ ಆಗಿರುವ ದಯಾ ನಾಯಕ್ ಕುರಿತ ಚಿತ್ರದಲ್ಲಿ ಅವರ ಜೀವನದ ನೈಜ ಘಟನೆಗಳನ್ನೇ ಹೆಚ್ಚಾಗಿ ತರುವುದು ಆನಂದ್ ಪಿ. ರಾಜ್ ಉಮೇದಿ. ಚಿತ್ರದ ಬಗ್ಗೆ ಸಾಯಿಕುಮಾರ್ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದು, ದಯಾ ನಾಯಕ್ ಅವರ ಮ್ಯಾನರಿಸಂಗಳನ್ನು ಕೇಳಿ ತಿಳಿದಿದ್ದಾರೆ.
ಮುಖಪುಟ / ಸ್ಯಾಂಡಲ್ವುಡ್