Don't Miss!
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- News Asianet Digital Network Survey: ಮತ್ತೊಮ್ಮೆ ಮೋದಿಗೆ ಜೈ ಎಂದ ಮತದಾರರು!
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅದ್ಭುತ ಕಲೆಗಾರ ಜಾನ್ ನ ಮಕ್ಕಳ ಚಿತ್ರ
ಬಾಲ ಕಾರ್ಮಿಕರ ಸಮಸ್ಯೆಗಳು, ಪರಿಹಾರ, ಶಿಕ್ಷಣ ವ್ಯವಸ್ಥೆ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲುವ ಈ ಚಿತ್ರ ಮಕ್ಕಳ ಕರುಣಾಜನಕ ಕಥೆಯನ್ನು ಪ್ರೇಕ್ಷಕರ ಮುಂದಿಡಲಿದೆ. ಬಡತನ, ಅನಕ್ಷರತೆ ಹಾಗೂ ಸೈನ್ಯಕ್ಕೆ ದೇಶ ವ್ಯಯಿಸುತ್ತಿರುವ ಖರ್ಚು ವೆಚ್ಚ ಕುರಿತು ಕೂಡಾ ಈ ಕಿರುಚಿತ್ರದಲ್ಲಿ ಹೇಳಲಾಗಿದೆ ಎನ್ನುತ್ತಾರೆ ಜಾನ್ .
ಬಾರ್ನ್ ಫ್ರೀ ಆರ್ಟ್ ಸ್ಕೂಲ್ ಬ್ಯಾನರ್ ಅಡಿಯಲ್ಲಿ ಚಿತ್ರಿತವಾಗಿರುವ "ಅನಂದ" ಸಿನಿಮಾದಿಂದ ಸಮಾಜಿಕ ಸಂದೇಶ ರವಾನೆ ಮಾಡಲು ಜಾನ್ ಇಚ್ಛಿಸಿದ್ದಾರೆ. ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಬಾಲ ಕಾರ್ಮಿಕ ಸಮಸ್ಯೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಬೇಕು ಎಂಬ ಉದ್ದೇಶದಿಂದ ಆನಂದ ಚಿತ್ರವನ್ನು ಇತರೆ ಭಾಷೆಗಳಿಗೆ ಡಬ್ ಮಾಡುವ ಯೋಜನೆ ಕೂಡಾ ಹಾಕಿಕೊಂಡಿದ್ದಾರೆ.
ಯಾರಿದು ಜಾನ್ ದೇವರಾಜ್ : ತೆರೆ ಹಿಂದಿನ ಕಲಾತ್ಮಕ ಶತಿ ಜಾನ್ ದೇವರಾಜ್ ಎಲ್ಲ ಬಗೆಯ ಕಲೆ , ಸಾಂಸ್ಕೃತಿಕ ರಂಗದಲ್ಲಿ ಪಳಗಿದವರು. ಬೀದಿ ನಾಟಕ, ನೃತ್ಯ, ಸಂಗೀತ ಕಾರ್ಯಕ್ರಮ, ಚಿತ್ರಕಲೆ, ಶಿಲ್ಪಕಲೆ ಹೀಗೆ ಹತ್ತು ಹಲವು ರಂಗದಲ್ಲಿ ತೊಡಗಿಸಿಕೊಂಡವರು. ಇದರ ಜೊತೆಗೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಸದಾ ಪಾಲ್ಗೊಳ್ಳುವುದು ಇವರ ವೃತ್ತಿ ಹಾಗೂ ಪ್ರವೃತ್ತಿಯಾಗಿದೆ.
ಆರ್ ಕೆ ನಾರಾಯಣ್ ಅವರ ಮಾಲ್ಗುಡಿ ಡೇಸ್ ಕಥೆಯಲ್ಲಿ ಬರುವ ಊರಿನ ಚಿತ್ರಣಕ್ಕೆ ನೈಜ ರೂಪ ಕೊಟ್ಟ ಕಲಾವಿದ ಜಾನ್. ಶಂಕರ್ ನಾಗ್ ನಿರ್ದೇಶನದಂತೆ ಅದ್ಭುತ ಸೆಟ್, ಶಿಲ್ಪಗಳನ್ನು ರೂಪಿಸಿ ಯಶಸ್ವಿಯಾದವರು. ಕುಬಿ ಮತ್ತು ಇಯಾಲಾ, ಮನೆ, ಮುತ್ತಿನ ಹಾರ, ಹರಕೆಯ ಕುರಿ, ಹಗಲು ವೇಷ ಮುಂತಾದ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿದ್ದಾರೆ.
ಮೈಮ್ ಕಲೆ ಆಧಾರಿಸಿ 19 ನಿಮಿಷಗಳ ಚಿತ್ರ ತಯಾರಿಸಿದ್ದಾರೆ. ಬಾಷಾ ಎಂಬ ಮೂಕಿ ಚಿತ್ರ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೆರೆ ಕಂಡಿದೆ. ಈಗ ಮಕ್ಕಳ ಚಿತ್ರದ ಮೂಲಕ ಮತ್ತೊಮ್ಮೆ ಜಾನ್ ಸಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ