ಸದ್ಯದಲ್ಲೇ ಡಾ ರಾಜ್ ಕಂಚಿನ ಪ್ರತಿಮೆ ಅನಾವರಣ

ಡಾ ರಾಜ್ ಸಮಾಧಿ ಅಭಿವೃದ್ಧಿಗಾಗಿ ಸರ್ಕಾರ 10 ಕೋಟಿ ರು. ಘೋಷಿಸಿತ್ತು. ಅದರಲ್ಲಿ 7 ಕೋಟಿ ರು. ಬಿಡುಗಡೆಯಾಗಿದೆ. ಈಗಾಗಲೇ 5.5 ಕೋಟಿಯ ಒಂದು ಹಂತದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ಸಮಾಧಿ ಸುತ್ತ ಹೂವಿನ ತೋಟ, ಎದುರಿಗೆ ಕಂಚಿನ ಪ್ರತಿಮೆ, ಪ್ರವೇಶ ದ್ವಾರದಲ್ಲಿ ಸ್ಮರಣ ಫಲಕಗಳನ್ನು ಇರಿಸಲಾಗಿದೆ. ಎರಡೂ ಬದಿಗಳಲ್ಲಿ 6 ಅಡಿ ಉದ್ದ, 3 ಅಡಿ ಅಗಲದ 20 ಕಲ್ಲಿನ ಫಲಕಗಳನ್ನು ಇಡಲಾಗಿದೆ. ಅವು ರಾಜ್ ಅಭಿನಯದ ಚಿತ್ರಗಳನ್ನು ನೆನಪಿಸುವಂತಿವೆ.
ಕೈಕಟ್ಟಿಕೊಂಡು ಮುಗುಳ್ನಗುತ್ತಿರುವ 3 ಅಡಿ ಉದ್ದದ ಕಂಚಿನ ಪ್ರತಿಮೆಯ ಅನಾವರಣಕ್ಕೆ ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ. ಸದ್ಯದಲ್ಲೇ ಅದು ಲೋಕಾರ್ಪಣೆಯಾಗಲಿದೆ. ಡಾ ರಾಜ್ ಹುಟ್ಟುಹಬ್ಬದ ನಿಮಿತ್ತ ಇದೇ ಏಪ್ರಿಲ್ 24 ರಂದು ಆ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Today (April 12th 2012), Dr Rajkumar's 6th Memory celebrated by his Family and Fans near Kateerava Studio, Bangalore.


Click it and Unblock the Notifications











