Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸ್ನೇಹ ಲೋಕ ಕಪ್’ ಮುಡಿಗೇರಿಸಿಕೊಂಡ 'ಶಿವ'ಣ್ಣ
ಡಾ.ವಿಷ್ಣುವರ್ಧನ್ ಮೆಮೋರಿಯಲ್ ಕಪ್ ಫೈನಲ್ ಪಂದ್ಯ ರೋಚಕ ಘಟ್ಟದಲ್ಲಿ ಅಂತ್ಯವಾಯಿತು. ಮೊದಲು ಬ್ಯಾಟ್ ಮಾಡಿದ'ಶಿವ' ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 97 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಇನ್ಫಿನಿಟಿ ಇಲೆವೆನ್ ತಂಡ ಕೇವಲ 61 ರನ್ಗಳಿಗೆ ಆಲೌಟ್ ಆಯಿತು.
ಶಿವ ತಂಡದಲ್ಲಿ ಕೆ ಪಿ ಶ್ರೀಕಾಂತ್ 17 ರನ್, ಲೋಕಿ 25 ರನ್ ಪೇರಿಸಿದರೆ ಶಿವರಾಜ್ ಕುಮಾರ್ ಒಂದು ರನ್ ಮಾಡಿ ರನ್ಔಟ್ ಆದರು. ಬ್ಯಾಟಿಂಗ್ನಲ್ಲಿ ಶಿವಣ್ಣ ವಿಫಲರಾದರೂ ಫೀಲ್ಡಿಂಗ್ನಲ್ಲಿ ಮಿಂಚಿದರು. ಎರಡು ಅದ್ಭುತ ಕ್ಯಾಚ್ಗಳನ್ನು ಹಿಡಿಯುವ ಮೂಲಕ ಶಿವಣ್ಣ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.
ಶಿವ ತಂಡಕ್ಕೆ ಬೆಸ್ಟ್ ಡಿಸಿಪ್ಲೀನ್ಡ್ ಟೀಮ್ ಎಂಬ ಪ್ರಶಸ್ತಿಯೂ ಸಿಕ್ಕಿತು. ಪಂದ್ಯ ಶ್ರೇಷ್ಠ (ಅನಂತ) ಹಾಗೂ ಸರಣಿ ಶ್ರೇಷ್ಠ (ಸುನಿಲ್) ಎರಡು ಪ್ರಶಸ್ತಿಗಳು ಶಿವ ತಂಡದ ಪಾಲಾದವು. ವಿಷ್ಣು ಅವರ ಪುತ್ರಿ ಕೀರ್ತಿ ಅವರು ಶಿವ ತಂಡಕ್ಕೆ ಪ್ರಶಸ್ತಿಯನ್ನು ವಿತರಿಸಿದರು. ಮಾಜಿ ಕ್ರಿಕೆಟಿಗೆ ವೆಂಕಟೇಶ್ ಪ್ರಸಾದ್, ಶಾಸಕ ವಿಜಯ್ ಕುಮಾರ್, ರಮೇಶ್ ಭಟ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. (ದಟ್ಸ್ಕನ್ನಡ ಸಿನಿವಾರ್ತೆ)