Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಖಾಲಿ ಖಾಲಿ ಕಣ್ಣಪರದೆಯಲ್ಲಿ ಯಶಸ್, ಸುಪ್ರೀತಾ
ದಿವಂಗತ ಶಂಕರ್ ನಾಗ್ ಅವರ 'ಗೀತಾ' ಚಿತ್ರದ 'ಕೇಳದೆ ನಿಮಗೀಗ...ದೂರದಲ್ಲಿ ಯಾರೋ' ಹಾಡಿನ ಸಾಲಿನ ಪ್ರಾರಂಭದ 'ಕೇಳದೆ ನಿಮಗೀಗ' ಎಂಬ ಸಾಲು ಚಿತ್ರವೊಂದಕ್ಕೆ ಶೀರ್ಷಿಕೆಯಾಗಿದ್ದು ಗೊತ್ತೇ ಇದೆ. ಸುದೀಪ್ ಶಿಷ್ಯ ಸತೀಶ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಯಶಸ್ ಸೂರ್ಯ, ಸುಪ್ರೀತಾ ಹಾಗೂ ಪೂಜಾ ಗಾಂಧಿ ಪ್ರಮುಖ ಪಾತ್ರಧಾರಿಗಳು. ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಹಾಡುಗಳೆರಡು ಬಾಕಿ ಇದ್ದವು.
ಈ 'ಕೇಳದೆ ನಿಮಗೀಗ' ಚಿತ್ರಕ್ಕಾಗಿ 'ಪ್ರೇಮಕಥೆ ಬರೆದನು ಪರಶಿವನು...' ಹಾಗೂ 'ಖಾಲಿ ಖಾಲಿ ಕಣ್ಣ ಪರದೆ...' ಹಾಡುಗಳ ಚಿತ್ರೀಕರಣ ಮಾಲೂರ್ ಶ್ರೀನಿವಾಸ್ ನೃತ್ಯನಿರ್ದೇಶನದಲ್ಲಿ ಇತ್ತೀಚಿಗೆ ನಡೆದಿದೆ. ಇನ್ನುಳಿದ ಹಾಡುಗಳ ಚಿತ್ರೀಕರಣ ಈ ಮೊದಲೇ ಮುಗಿದಿರುವುದರಿಂದ ಚಿತ್ರದ ಚಿತ್ರೀಕರಣ ಮುಗಿದಂತಾಗಿದೆ. ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಾರಂಭವಾಗಲಿದೆ. ಶ್ರೀ ವೆಂಕಟ್ ಕ್ಯಾಮರಾ ಹಿಡಿದಿದ್ದು ಅಲ್ಟಿಮೇಟ್ ಶಿವು ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ಚಿತ್ರಕ್ಕಿದೆ.
ವಿ ಮನೋಹರ್ ಸಂಗೀತ ಹಾಗೂ ಹಾಡುಗಳಿರುವ ಈ ಚಿತ್ರದಲ್ಲಿ ಡಾ ನಾಗೇಂದ್ರ ಪ್ರಸಾದ್ ಕೂಡ ಹಾಡು ಬರೆದಿದ್ದಾರೆ. ಮಿಂಚು ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರವನ್ನು ಯುವರಾಜ್ ಸಮರ್ಥ್ ನಿರ್ಮಿಸಿದ್ದಾರೆ. 'ಶಿಶಿರ' ಚಿತ್ರದಲ್ಲಿ ಅಮೋಘವಾಗಿ ನಟಿಸಿದ್ದ ಯಶಸ್ ಸೂರ್ಯ ಈ ಚಿತ್ರದ ನಾಯಕರು. ಸುಪ್ರೀತಾ, ಪೂಜಾ ಗಾಂಧಿ ಅವರೊಂದಿಗೆ ರೂಪಾದೇವಿ, ನೀನಾಸಂ ಅಶ್ವಥ್, ನವೀನ್ ತೀರ್ಥಹಳ್ಳಿ, ಬುಲೆಟ್ ಪ್ರಕಾಶ್ ಮುಂತಾದವರು ಪೋಷಕಪಾತ್ರದಲ್ಲಿದ್ದಾರೆ. (ಒನ್ ಇಂಡಿಯಾ ಕನ್ನಡ)