Don't Miss!
- News ಕುಡುಕರಿಗೆ ಎಣ್ಣೆ ಸಿಗುತ್ತಿಲ್ಲ, ಪರದಾಟ ನೋಡಲು ಆಗುತ್ತಿಲ್ಲ!
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಾರ ನಾನು ಗಾಂಧಿ, ಮಹರ್ಷಿ ಚಿತ್ರಗಳು ತೆರೆಗೆ
ಎನ್ ಆರ್ ನಂಜುಂಡೆಗೌಡ ಅವರು ಈ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಇವರ ಪುತ್ರ ಮಾಸ್ಟರ್ ಲೋಹಿತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರದಲ್ಲಿ ರಮೇಶ್ ಭಟ್, ಪ್ರಮೀಳ ಜೋಷಾಯಿ, ಸುಂದರ್ ರಾಜ್, ಸದಾಶಿವ ಬ್ರಹ್ಮಾವರ, ಮಂಡ್ಯ ರಮೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ. ನಾಗರಾಜ್ ಅಡ್ವಾಣಿ ಅವರ ಕ್ಯಾಮೆರಾ ಕೈಚಳಕ, ರಾಜಪ್ಪ ಧಳವಾಯಿ ಅವರ ಸಂಭಾಷಣೆ ಹಾಗೂ ರಾಜು ಉಪೇಂದ್ರ ಕುಮಾರ್ ಅವರ ಸಂಗೀತ ಈ ಚಿತ್ರದ ವಿಶೇಷತೆಯಾಗಿದೆ.
ಒರಟ ಐಲವ್ ಯೂ ಚಿತ್ರದ ನಾಯಕ ನಟ ಪ್ರಶಾಂತ್ ಮತ್ತು ಮುಂಗಾರು ಮಳೆ ಖ್ಯಾತಿಯ ಪೂಜಾ ಗಾಂಧಿ ಪ್ರಧಾನ ಭೂಮಿಕೆಯಲ್ಲಿರುವ 'ಮಹರ್ಷಿ' ಚಿತ್ರ ಸೆನ್ಸಾರ್ ಮಂಡಳಿಯ 'ಎ' ಪ್ರಮಾಣ ಪತ್ರದೊಂದಿಗೆ ಈ ಶುಕ್ರವಾರ ತೆರೆ ಕಾಣಲಿದೆ. ಡಿ ಕೆ ರಾಮಕೃಷ್ಣ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಕಾಲೇಜ್ ಆವರಣದಲ್ಲಿ ನಡೆಯುವ ಘಟನೆ ಮತ್ತು ತಾಯಿ ಸೆಂಟಿಮೆಂಟ್ ಸುತ್ತ ಚಿತ್ರಕತೆ ರೂಪಿಸಲಾಗಿದೆ. ರಮೇಶ್ ಅಲಬೈ ಅವರ ಛಾಯಾಗ್ರಹಣ, ಶ್ರೀಮುರಲಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಿಯಾಂಕ, ಮುನಿ, ವಿಶ್ವ ಮುಂತಾದವರು ತಾರಗಣದಲ್ಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)