Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೊಂದಲದ ಗೂಡಾದ ಚಂದ್ರಮುಖಿ ನಯನತಾರಾ
ನಟಿ ನಯನತಾರಾ ಚಿತ್ರರಂಗಕ್ಕೆ ವಿದಾಯ ಹೇಳಿದ್ದು ಗೊತ್ತೆ ಇದೆ. ತೆಲುಗಿನ 'ಶ್ರೀರಾಮರಾಜ್ಯಂ' ಚಿತ್ರವೇ ತಮ್ಮ ಅಭಿನಯದ ಕೊನೆಯ ಚಿತ್ರ ಎಂದು ಸ್ವತಃ ನಯನಿ ಘೋಷಿಸಿದ್ದರು. ಡ್ಯಾನ್ಸ್ ರಾಜ ಪ್ರಭುದೇವ ಅವರನ್ನು ಮದುವೆಯಾಗುತ್ತಿರುವ ಉದ್ದೇಶದಿಂದ ನಯನತಾರಾ ಈ ನಿರ್ಧಾರಕ್ಕೆ ಬಂದಿದ್ದರು.
'ಶ್ರೀರಾಮರಾಜ್ಯಂ' ಚಿತ್ರದ ಬಳಿಕ ಆಕೆಗೆ ತೆಲುಗು, ತಮಿಳಿನಿಂದ ಸಾಲು ಸಾಲು ಆಫರ್ಗಳು ಬರುತ್ತಿವೆ. ಇತ್ತೀಚೆಗೆ 'ಶ್ರೀರಾಮರಾಜ್ಯಂ' ಚಿತ್ರದ 50 ಡೇಸ್ ಕಾರ್ಯಕ್ರಮ ನಡೆಯಿತು. ನಯನತಾರಾ ಕೂಡ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನಯನತಾರಾಗೆ ತೆಲುಗು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದಾಸರಿ ನಾರಾಯಣ ರಾವ್ ಕಿವಿಮಾತು ಹೇಳಿದರು.
"ಇದೇ ಕೊನೆಯ ಚಿತ್ರ ಎಂದು ಕೊಳ್ಳಬೇಡ. ಮದುವೆಯಾದ ಬಳಿಕವೂ ಅಭಿನಯಿಸಬಹುದು" ಎಂದಿದ್ದಾರೆ ದಾಸರಿ. ಅವರು ಹಾಗೆ ಹೇಳಿದ್ದೇ ತಡ ತಮಿಳಿನ ವಿಜಯ್, ವೆಂಕಟ್ ಹಾಗೂ ಲಿಂಗುಸ್ವಾಮಿ ಎಂಬ ನಿರ್ಮಾಪಕರು ನಯನತಾರಾ ಮುಂದೆ ಕಾಲ್ಶೀಟ್ ಹಿಡಿದಿದ್ದಾರೆ. ಆದರೆ ನಯನತಾರಾ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಮತ್ತೆ ಬಣ್ಣ ಹಚ್ಚು ಬೇಕೆ ಬೇಡವೆ ಎಂಬ ಗೊಂದಲದಲ್ಲಿ ನಯನತಾರಾ ಇದ್ದಾರೆ. (ಏಜೆನ್ಸೀಸ್)