Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೊಂದಲದ ಗೂಡಾದ ಚಂದ್ರಮುಖಿ ನಯನತಾರಾ
ನಟಿ ನಯನತಾರಾ ಚಿತ್ರರಂಗಕ್ಕೆ ವಿದಾಯ ಹೇಳಿದ್ದು ಗೊತ್ತೆ ಇದೆ. ತೆಲುಗಿನ 'ಶ್ರೀರಾಮರಾಜ್ಯಂ' ಚಿತ್ರವೇ ತಮ್ಮ ಅಭಿನಯದ ಕೊನೆಯ ಚಿತ್ರ ಎಂದು ಸ್ವತಃ ನಯನಿ ಘೋಷಿಸಿದ್ದರು. ಡ್ಯಾನ್ಸ್ ರಾಜ ಪ್ರಭುದೇವ ಅವರನ್ನು ಮದುವೆಯಾಗುತ್ತಿರುವ ಉದ್ದೇಶದಿಂದ ನಯನತಾರಾ ಈ ನಿರ್ಧಾರಕ್ಕೆ ಬಂದಿದ್ದರು.
'ಶ್ರೀರಾಮರಾಜ್ಯಂ' ಚಿತ್ರದ ಬಳಿಕ ಆಕೆಗೆ ತೆಲುಗು, ತಮಿಳಿನಿಂದ ಸಾಲು ಸಾಲು ಆಫರ್ಗಳು ಬರುತ್ತಿವೆ. ಇತ್ತೀಚೆಗೆ 'ಶ್ರೀರಾಮರಾಜ್ಯಂ' ಚಿತ್ರದ 50 ಡೇಸ್ ಕಾರ್ಯಕ್ರಮ ನಡೆಯಿತು. ನಯನತಾರಾ ಕೂಡ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನಯನತಾರಾಗೆ ತೆಲುಗು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದಾಸರಿ ನಾರಾಯಣ ರಾವ್ ಕಿವಿಮಾತು ಹೇಳಿದರು.
"ಇದೇ ಕೊನೆಯ ಚಿತ್ರ ಎಂದು ಕೊಳ್ಳಬೇಡ. ಮದುವೆಯಾದ ಬಳಿಕವೂ ಅಭಿನಯಿಸಬಹುದು" ಎಂದಿದ್ದಾರೆ ದಾಸರಿ. ಅವರು ಹಾಗೆ ಹೇಳಿದ್ದೇ ತಡ ತಮಿಳಿನ ವಿಜಯ್, ವೆಂಕಟ್ ಹಾಗೂ ಲಿಂಗುಸ್ವಾಮಿ ಎಂಬ ನಿರ್ಮಾಪಕರು ನಯನತಾರಾ ಮುಂದೆ ಕಾಲ್ಶೀಟ್ ಹಿಡಿದಿದ್ದಾರೆ. ಆದರೆ ನಯನತಾರಾ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಮತ್ತೆ ಬಣ್ಣ ಹಚ್ಚು ಬೇಕೆ ಬೇಡವೆ ಎಂಬ ಗೊಂದಲದಲ್ಲಿ ನಯನತಾರಾ ಇದ್ದಾರೆ. (ಏಜೆನ್ಸೀಸ್)